Advertisement

Pakistan ಗೆಲುವು ಗಾಜಾ ಜನತೆಗೆ ಅರ್ಪಿಸಿದ ರಿಜ್ವಾನ್‌!; ತೀವ್ರ ಟೀಕೆ

11:25 PM Oct 11, 2023 | Team Udayavani |

ಹೈದರಾಬಾದ್‌: ಶ್ರೀಲಂಕಾ ವಿರುದ್ಧ ಪಾಕಿಸ್ಥಾನ ಸಾಧಿಸಿದ ಗೆಲುವನ್ನು ಮೊಹಮ್ಮದ್‌ ರಿಜ್ವಾನ್‌ “ಗಾಜಾದಲ್ಲಿರುವ ಸಹೋದರ, ಸಹೋದರಿಯರಿಗೆ’ ಅರ್ಪಿಸಿ ತೀವ್ರ ಟೀಕೆಗೆ ಒಳಗಾಗಿದ್ದಾರೆ.

Advertisement

ಶ್ರೀಲಂಕಾ ವಿರುದ್ಧದ ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಮೊಹಮ್ಮದ್‌ ರಿಜ್ವಾನ್‌ ಅಜೇಯ ಶತಕ ಬಾರಿಸಿ ತಂಡದ ಜಯಭೇರಿ ಮೊಳಗಿಸಿದ್ದರು. ಅವರ ಆಟಕ್ಕೆ ಎಲ್ಲ ದಿಕ್ಕುಗಳಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಗಾಜಾ ಹೇಳಿಕೆಯಿಂದ ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ.
ಮೊಹಮ್ಮದ್‌ ರಿಜ್ವಾನ್‌ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸುವುದು ಒಳ್ಳೆಯದು. ಜಗತ್ತಿನ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದಿದ್ದಾರೆ.

“ಈ ಗೆಲುವು ಗಾಜಾದಲ್ಲಿರುವ ನಮ್ಮ ಸಹೋದರ, ಸಹೋದರಿಯರಿಗಾಗಿ. ತಂಡಕ್ಕೆ ಗೆಲುವಿನ ಕೊಡುಗೆ ತಂದಿತ್ತಿದ್ದಕ್ಕೆ ಖುಷಿಯಾಗಿದೆ. ಜಯವನ್ನು ಸುಲಭಗೊಳಿಸಿದ ಅಬ್ದುಲ್ಲ ಶಫೀಕ್‌ ಮತ್ತು ಹಸನ್‌ ಅಲಿ ಅವರಿಗೆ ಶ್ರೇಯಸ್ಸು ಸಲ್ಲಬೇಕು. ಹೈದರಾಬಾದ್‌ ಜನತೆಯ ಅಮೋಘ ಆತಿಥ್ಯ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂಬುದಾಗಿ ಮೊಹಮ್ಮದ್‌ ರಿಜ್ವಾನ್‌ “ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next