Advertisement

ಯುವ ಆಟಗಾರನಿಗೆ ಟೆಸ್ಟ್ ನಾಯಕತ್ವ ನೀಡಲು ಮುಂದಾದ ಬಿಸಿಸಿಐ

02:51 PM Dec 09, 2021 | Team Udayavani |

ಮುಂಬೈ: ಟೀಂ ಇಂಡಿಯಾದಲ್ಲಿ ಬದಲಾವಣೆ ಪರ್ವ ನಡೆಯುತ್ತಿದೆ. ಟಿ20 ತಂಡದ ನಾಯಕತ್ವದ ಬಳಿಕ ಇದೀಗ ಏಕದಿನ ತಂಡದ ನಾಯಕತ್ವದ ಹೊಣೆಗಾರಿಕೆಯನ್ನೂ ರೋಹಿತ್ ಶರ್ಮಾರಿಗೆ ನೀಡಲಾಗಿದೆ. ಈ ಹಿಂದೆ ಮೂರು ಮಾದರಿಯ ತಂಡಕ್ಕೆ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರಿಗೆ ಟೆಸ್ಟ್ ನಾಯಕತ್ವದಲ್ಲಿ ಮಾತ್ರ ಮುಂದುವರಿಸಲಾಗಿದೆ.

Advertisement

ಈ ನಡುವೆ ದಕ್ಷಿಣ ಆಫ್ರಿಕಾ ಸರಣಿಗೆ ಪ್ರಕಟಿಸಲಾದ ತಂಡದಲ್ಲಿ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ತಂಡದ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ. ಕಳಪೆ ಫಾರ್ಮ್ ನಲ್ಲಿರುವ ಅಜಿಂಕ್ಯ ರಹಾನೆ ಅವರನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆಯಾದರೂ ಉಪ ನಾಯಕನ ಸ್ಥಾನದಿಂದ ತೆಗೆಯಲಾಗಿದೆ.

ಸದ್ಯ ಟಿ20 ತಂಡದ ಉಪನಾಯಕಮ ಸ್ಥಾನವನ್ನು ಕೆ.ಎಲ್.ರಾಹುಲ್ ಗೆ ನೀಡಲಾಗಿದೆ. ಇದುವರೆಗೆ ಏಕದಿನ ತಂಡದ ಉಪನಾಯಕನ ಸ್ಥಾನಕ್ಕೆ ಆಯ್ಕೆ ನಡೆದಿಲ್ಲ. ಆದರೆ ಏಕದಿನ ತಂಡಕ್ಕೂ ಕೆ.ಎಲ್.ರಾಹುಲ್ ಅವರನ್ನೇ ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವರದಿಯ ಪ್ರಕಾರ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಅವರನ್ನು ಟೆಸ್ಟ್ ತಂಡದಲ್ಲಿ ಬೆಳೆಸುವ ಇರಾದೆಯಲ್ಲಿ ಬಿಸಿಸಿಐ ಇದೆ. ವಿರಾಟ್ ಬಳಿಕ ಟೆಸ್ಟ್ ತಂಡದ ನಾಯಕನನ್ನಾಗಿ ರಿಷಭ್ ಪಂತ್ ರನ್ನು ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next