Advertisement

IPL ಗೆ ರಿಷಭ್‌ ಪಂತ್‌: ಗಂಗೂಲಿ ವಿಶ್ವಾಸ

11:23 PM Nov 10, 2023 | Team Udayavani |

ಕೋಲ್ಕತಾ: ಭಾರತದ ಸ್ಟಾರ್‌ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಭ್‌ ಪಂತ್‌ ಮುಂದಿನ ಐಪಿಎಲ್‌ ಸೀಸನ್‌ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕ ಸೌರವ್‌ ಗಂಗೂಲಿ ಹೇಳಿದ್ದಾರೆ.

Advertisement

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗಿರುವ ರಿಷಭ್‌ ಪಂತ್‌ ಕಳೆದ ವರ್ಷ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಬದುಕಿ ಉಳಿ ದದ್ದೇ ಪವಾಡವಾಗಿತ್ತು.
ಗುರುವಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಭ್ಯಾಸದ ವೇಳೆ “ಜಾಧವ ಪುರ್‌ ಯುನಿವರ್ಸಿಟಿ ಸಾಲ್ಟ್ ಲೇಕ್‌ ಕ್ಯಾಂಪಸ್‌ ಗ್ರೌಂಡ್‌’ಗೆ ಆಗಮಿಸಿದ ಪಂತ್‌ ಸಹ ಆಟಗಾರರೊಂದಿಗೆ ಬೆರೆತಿದ್ದರು.
ಮಾಧ್ಯಮದವರೊಂದಿಗೆ ಮಾತಾ ಡಿದ ಸೌರವ್‌ ಗಂಗೂಲಿ, “ಪಂತ್‌ ಈಗ ಕ್ಷೇಮ. ಚೇತರಿಸಿಕೊಂಡಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ಆಡಲಿದ್ದಾರೆ. ಸದ್ಯ ಅವರಿಲ್ಲಿ ಅಭ್ಯಾಸ ನಡೆಸುವುದಿಲ್ಲ. ಜನವರಿಯಲ್ಲಿ ಅಭ್ಯಾಸ ಆರಂಭಿಸ ಬಹುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next