Advertisement

ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್

10:24 PM Jan 21, 2021 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯ ನೆಲದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವು ದಾಖಲಿಸಿದ ಬಳಿಕ ತವರಿಗೆ ಮರಳಿದ ಬ್ರಿಸ್ಬೇನ್‌ ಹೀರೋ ರಿಷಭ್‌ ಪಂತ್‌ ಅವರಿಗೆ ಹೊಸದಿಲ್ಲಿಯಲ್ಲಿ ಭವ್ಯ ಸ್ವಾಗತ ಲಭಿಸಿದೆ. ಕ್ರಿಕೆಟ್‌ ಅಭಿಮಾನಿಗಳು ವಿಜಯ ಘೋಷಣೆಯ ಮೂಲಕ ತಮ್ಮ ಮೆಚ್ಚಿನ ಆಟಗಾರನನ್ನು ಬರಮಾಡಿಕೊಂಡರು.

Advertisement

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರಿಷಭ್‌ ಪಂತ್‌, ಮಾಜಿ ನಾಯಕ ಹಾಗೂ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಜತೆ ತನ್ನನ್ನು ಹೋಲಿಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧೋನಿ ಅವರಂಥ ಮಹಾನ್‌ ಆಟಗಾರರಿಗೆ ನೀವು ಹೋಲಿಕೆ ಮಾಡಿದಾಗ ಉತ್ತಮ ಭಾವನೆ ಮೂಡುತ್ತದೆ ನಿಜ. ಆದರೆ ನಾನು ಯಾರೊಂದಿಗೂ ಹೋಲಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಭಾರತ ಕ್ರಿಕೆಟ್‌ ತಂಡದಲ್ಲಿ ನನ್ನದೇ ಆದ ಹೆಸರು ಮೂಡಿಸುವುದನ್ನು ಬಯಸುತ್ತೇನೆ. ಅದರತ್ತ ಮಾತ್ರ ಗಮನ ಕೇಂದ್ರೀಕರಿಸಿದ್ದೇನೆ. ಅಲ್ಲದೇ ಯುವ ಆಟಗಾರರನ್ನು ಮಹಾನ್‌ ಆಟಗಾರರೊಂದಿಗೆ ಹೋಲಿಕೆ ಮಾಡುವುದು ಶೋಭೆ ತರುವುದಿಲ್ಲ’ ಎಂದು ಪಂತ್‌ ಹೇಳಿದರು.

ಇದನ್ನೂ ಓದಿ:ಪರೀಕ್ಷೆ ಪಾಸಾಯ್ತು ಹಾಕ್‌-ಐ ಯುದ್ಧ ವಿಮಾನ : ಒಡಿಶಾದ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next