Advertisement

ಕೋವಿಡ್ ನಿರ್ಮೂಲನೆಗಾಗಿ ಪೂಜೆ

01:18 PM Jun 14, 2020 | Naveen |

ರಿಪ್ಪನ್‌ಪೇಟೆ: ಕೋವಿಡ್ ರೋಗ ನಿರ್ಮೂಲನೆಗಾಗಿ ಕೋಣಂದೂರು ಬೃಹನ್ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಾಗೂ ಲೋಕಕಲ್ಯಾಣಾರ್ಥಾವಾಗಿ ಮಹಾರುದ್ರಾಭಿಷೇಕ, ಲಿಂಗೈಕ್ಯ ಶ್ರೀಗಳ ಪುಣ್ಯಾರಾಧಾನೆ ಪ್ರಯುಕ್ತ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಕಾರ್ಯಕ್ರಮಗಳನ್ನು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನೇರವೇರಿಸಿದರು.

Advertisement

ನಂತರ ಆಶೀರ್ವಚನ ನೀಡಿದ ಅವರು, ವಿಶ್ವವನ್ನು ತಲ್ಲಣಗೊಳಿಸಿರುವ ಮಾರಕ ರೋಗ ಕೋವಿಡ್ ಮುಕ್ತವಾಗಲು ಮನುಷ್ಯ ಜಾಗೃತನಾಗಿ ಮೊತ್ತೂಬ್ಬರನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗುವಂತೆ ಕರೆ ನೀಡಿದರು. ಸರ್ಕಾರ, ಸಂಘ-ಸಂಸ್ಥೆಗಳು, ಆಶಾ, ಆರೋಗ್ಯ ರಕ್ಷಣಾ ಇಲಾಖೆ ಅನೇಕ ರೀತಿಯಿಂದ ಮಾರಕ ರೋಗ ನಿರ್ಮೂಲನೆಗಾಗಿ ಪಣ ತೊಟ್ಟಿರುವುದು ಶ್ಲಾಘನೀಯವಾಗಿದೆ. ಪ್ರಧಾನ ಮಂತ್ರಿ ಮೋದಿ ಹಾಗೂ ರಾಜ್ಯ ಸರ್ಕಾರಗಳು ಸಹ ಪಕ್ಷಭೇದ ಮರೆತು ರೋಗ ನಿಯಂತ್ರಣದಲ್ಲಿ ತೊಡಗಿಕೊಂಡಿರುವುದು ಪ್ರಶಂಸನೀಯವೆಂದರು. ಇದೇ ಸಂದರ್ಭದಲ್ಲಿ ಹಿರಿಯಜ್ಜಿಯನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.

ಬಿರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ, ಧಮರಾಜ್‌ಗೌಡ ರಿಪ್ಪನ್‌ಪೇಟೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next