Advertisement

ಔರಂಗಾಬಾದ್‌ ಇನ್ನೂ ಉದ್ವಿಗ್ನ; ಆದರೂ ಪರಿಸ್ಥಿತಿ ನಿಯಂತ್ರಣದಲ್ಲಿ

11:26 AM May 15, 2018 | udayavani editorial |

ಔರಂಗಾಬಾದ್‌ : ಕೋಮು ಗಲಭೆ ಪೀಡಿತ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಇಂದು ಮಂಗಳವಾರ ಕೂಡ ಉದ್ರಿಕ್ತತೆ ಮುಂದುವರಿದಿದೆ. ಆದರೆ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಅಮಾನತುಗೊಳಿಸಲಾಗಿದ್ದ ಇಂಟರ್‌ನೆಟ್‌ ಸೇವೆಯನ್ನು ಇಂದು ಪುನರಾರಂಭಿಸಲಾಗಿದೆ.

Advertisement

ನಾಲ್ಕು ದಿನಗಳ ಹಿಂದೆ ಔರಂಗಾಬಾದ್‌ ನಲ್ಲಿ ಸ್ಫೋಟಗೊಂಡಿದ್ದ ಕೋಮು ಗಲಭೆಗೆ ಇಬ್ಬರು ಬಲಿಯಾಗಿದ್ದಾರೆ; 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ; ಇವರಲ್ಲಿ 12 ಮಂದಿ ಪೊಲೀಸರು ಕೂಡ ಸೇರಿದ್ದಾರೆ. 

ಪೊಲೀಸರು ಕೋಮು ಗಲಭೆ ಸಂಬಂಧ 6 ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ; ಇವುಗಳಲ್ಲಿ ಗುರುತಿಸಲ್ಪಡದ 3,000 ಮಂದಿಯನ್ನು ಆರೋಪಿಗಳನ್ನಾಗಿ ದಾಖಲಿಸಲಾಗಿದೆ. ಕಿಚ್ಚಿಡುವಿಕೆ, ದೊಂಬಿ, ಸಾರ್ವಜನಿಕ ಸೊತ್ತು ಹಾನಿ ಮುಂತಾದ ಅಪರಾಧಗಳನ್ನು ಇವರು ಎಸಗಿರುವುದಾಗಿ ಕೇಸುಗಳಲ್ಲಿ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next