Advertisement

ರೈತರ ಹೋರಾಟ ಬೆಂಬಲ ಟ್ವೀಟ್ ಗೆ 18 ಕೋಟಿ ಹಣ ಪಡೆದಿದ್ರಾ ರಿಹಾನಾ ?

09:40 PM Feb 07, 2021 | Team Udayavani |

ದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಅಂತಾರಾಷ್ಟ್ರೀಯ ಗಾಯಕಿ ರಿಹಾನಾ ಟ್ವೀಟ್ ಮಾಡಿ ಬೆಂಬಲಿಸಿದ್ದರು. ಅವರ ಈ ಟ್ವೀಟ್ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.ಒಂದಿಷ್ಟು ಜನ ರಿಹಾನಾ ಟ್ವೀಟ್ ಬೆಂಬಲಿಸಿದ್ದರೆ, ಮತ್ತೊಂದಿಷ್ಟು ಮಂದಿ ಆಕೆಯ ವಿರುದ್ಧ ತಿರುಗಿ ಬಿದ್ದಿದ್ದರು.

Advertisement

ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಲು ನೀವ್ಯಾರು ಎನ್ನುವ ಪ್ರಶ್ನೆಗಳು ಆಕೆಗೆ ಎದುರಾಗಿದ್ದವು. ಅಷ್ಟೇ ಏಕೆ ಈ ಟ್ವೀಟ್ ಹಿಂದೆ ಖಲಿಸ್ಥಾನ ಬೆಂಬಲ ಇದೆ, ಈ ಒಂದು ಟ್ವೀಟ್ ಗೆ ಆಕೆಗೆ 18 ಕೋಟಿ ರೂ. ನೀಡಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಈ ಆರೋಪ ಸುಳ್ಳು ಎಂದಿದೆ ಕೆನಡಾ ಮೂಲದ ಖಲಿಸ್ಥಾನ ಪರ ಸಂಘಟನೆ.

 ಇದನ್ನೂ ಓದಿ :ಕೆಂಬಣ್ಣ ನೀರಲ್ಲಿ ಮಿಂದೆದ್ದ ಇಂಡೋನೇಷ್ಯಾದ ಹಳ್ಳಿ: ಇಲ್ಲಿದೆ ಅಸಲಿ ಕಹಾನಿ

ರಿಹಾನಾಗೆ ಹಣ ನೀಡಿರುವ ಆರೋಪ ತಳ್ಳಿಹಾಕಿರುವ ಸಂಘಟನೆ Poetic Justice Foundation,ನಾವು ಈ ವಿಷಯದ ( ರೈತ ಹೋರಾಟ) ಬಗ್ಗೆ ಮಾತಾಡಲು ಯಾರಿಗೂ ಹಣ ನೀಡಿಲ್ಲ. ಕೇವಲ ಪ್ರೋತ್ಸಾಹಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next