Advertisement
ಮೂರು ವರ್ಷದಲ್ಲಿ ಐದು ಸಾವುಕಳೆದ ಮೂರು ವರ್ಷಗಳಲ್ಲಿ ಡಿವೈಡರ್ ನಡುವೆ ದ್ವಿಚಕ್ರವಾಹನಗಳು ಹಾದುಹೋಗಿ ಡಿಕ್ಕಿ ಹೊಡೆದ ಪರಿಣಾಮ 23ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇದರಿಂದಾಗಿ ಐದು ಮಂದಿ ಸಾವಿಗೀಡಾಗಿದ್ದಾರೆ.
ರಾ.ಹೆ. 66ರ ಉದ್ಯಾವರ ಜನತಾ ಗ್ಯಾರೇಜ್, ಕಟಪಾಡಿ ತೇಕಲತೋಟ, ಕಲ್ಲಾಪು ಸೇತುವೆ, ಪಾಂಗಾಳ – ಮೂಡಬೆಟ್ಟು ಕ್ರಾಸ್, ಉಳಿಯಾರಗೋಳಿ ಬಿಕ್ಕೋ, ಮೂಳೂರು ಬಿಲ್ಲವ ಸಂಘ, ಮೂಳೂರು ಸುನ್ನಿ ಸೆಂಟರ್, ಉಚ್ಚಿಲ ಸಂತೆ ಮಾರ್ಕೆಟ್ ಬಳಿ ದ್ವಿಚಕ್ರ ವಾಹನಗಳನ್ನು ನುಗ್ಗಿಸಿಕೊಂಡು ಹೋಗುವ ಅಪಾಯಕಾರಿ ಸರ್ಕಸ್ ನಡೆಯುತ್ತಿದೆ. ತಾವೇ ಅಥವಾ ಮತ್ತೂಬ್ಬರ ಬಲಿಗೆ ಕಾರಣರಾಗುತ್ತಿರುವ ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ನುಗ್ಗಿಸಿಕೊಂಡು ನೇರವಾಗಿ ಹೆದ್ದಾರಿಯನ್ನು ಪ್ರವೇಶಿಸುತ್ತಿದ್ದು, ಈ ವೇಳೆ ಹೆದ್ದಾರಿಗೆ ಬರುವ ವಾಹನಗಳನ್ನು ಅಂದಾಜಿಸುವಲ್ಲಿ ವಿಫಲರಾಗಿ ವಾಹನಗಳಿಗೆ ಢಿಕ್ಕಿ ಹೊಡೆಯುತ್ತಾರೆ. ಅಥವಾ ಆ ವಾಹನಗಳನ್ನು ತಪ್ಪಿಸಲು ಹೋಗಿ ಸ್ವತಃ ತಾವೇ ಅಪಘಾತಕ್ಕೊಳಗಾಗುತ್ತಾರೆ.
Related Articles
ರಾ.ಹೆ. 66ರ ಚತುಷ್ಪಥ ಯೋಜನೆಯ ಕಾಮಗಾರಿ ವೇಳೆ ಹೆದ್ದಾರಿ ಇಲಾಖೆ ಮತ್ತು ಕಾಮಗಾರಿಯ ಗುತ್ತಿಗೆ ಕಂಪೆನಿಯು ಸ್ಥಳೀಯರ ಬೇಡಿಕೆಯನ್ನು ಬದಿಗಿರಿಸಿ ತಮ್ಮ ಇಚ್ಛೆಯಂತೆ ಪ್ರತಿ ಒಂದೂವರೆ ಕಿ.ಮೀ. ಅಂತರದಲ್ಲಿ ಡೈವರ್ಷನ್ಗಳನ್ನು ತೆಗೆದುಕೊಟ್ಟಿರುವುದೇ ದ್ವಿಚಕ್ರ ವಾಹನ ಸವಾರರ ಡಿವೈಡರ್ ನಡುವೆ ವಾಹನಗಳನ್ನು ತೂರಿಸಿಕೊಂಡು ಹೋಗಲು ಕಾರಣವಾಗಿದೆ.
Advertisement
ನೂರು ಮೀ. ಓಡಾಡುವವರು ಕೂಡ ಕನಿಷ್ಠ ಒಂದೂವರೆ ಕಿ.ಮೀ. ದೂರದಲ್ಲಿರುವ ಡೈವರ್ಶನ್ ಬಳಿಗೆ ತೆರಳಿದಲ್ಲಿ ಸಮಯ ಮತ್ತು ಪೆಟ್ರೋಲಿನ ಖರ್ಚು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದು ದ್ವಿಚಕ್ರ ವಾಹನ ಸವಾರರ ಅಭಿಪ್ರಾಯವಾಗಿದೆ.
ದ್ವಿಚಕ್ರ ವಾಹನ ಸವಾರರೇ ಯೋಚಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಅಪಘತಾ ಸಂಭವಿಸಿದರೂ ಹೆಚ್ಚಾಗಿ ಸಾವು – ನೋವಿಗೆ ಗುರಿಯಾಗುವವರು ದ್ವಿಚಕ್ರ ವಾಹನ ಸವಾರರೇ ಆಗಿರುತ್ತಾರೆ. ಜತೆಗೆ ಎಷ್ಟೇ ಅಪಘಾತ ಟ್ರಾಫಿಕ್ ನಿಯಮ, ಸಂಚಾರ ನಿಯಮಗಳನ್ನು ಉಲ್ಲಂಘಿಸಿಕೊಂಡು ವಾಹನ ಚಲಾಯಿಸುವುದರಲ್ಲಿ ದ್ವಿಚಕ್ರ ವಾಹನ ಸವಾರರದ್ದೇ ಮೇಲುಗೈ ಆಗಿರುತ್ತದೆ. ಸ್ವತಃ ಸವಾರರೇ ಈ ಬಗ್ಗೆ ಆಲೋಚಿಸುವ ಅಗತ್ಯವಿದೆ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ. ಪೊಲೀಸ್ ಇಲಾಖೆ ಮತ್ತೆ ಎಚ್ಚರ ವಹಿಸಲಿ
ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿವೈಡರ್ ನಡುವಿನ ವಾಹನ ಸಂಚಾರದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಬಹಳಷ್ಟು ಅಪಘಾತಗಳು ನಡೆಯುತ್ತಿದ್ದು, ಅದನ್ನು ಮನಗಂಡು ಹಿಂದಿನ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆದ್ದಾರಿ ಇಲಾಖೆಗೆ ಪತ್ರ ಬರೆದು ಇಂತಹ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಬ್ಬಿಣದ ರಾಡ್ಗಳನ್ನು ಅಳವಡಿಸಿ, ಕೆಲವೆಡೆ ಕಲ್ಲು ಮತ್ತು ಮಣ್ಣುಗಳನ್ನು ಹಾಕಿ ದ್ವಿಚಕ್ರ ವಾಹನ ಸವಾರರನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತು. ಇದರಿಂದಾಗಿ ಇಂತಹ ವಾಹನ ಅಪಘಾತಗಳು ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದೀಗ ಮತ್ತೆ ಅಂತಹ ಪ್ರವೃತ್ತಿ ಮುಂದುವರಿದಿದೆ. ಪೊಲೀಸ್ ಇಲಾಖೆ ಎಚ್ಚರ ವಹಿಸಲಿ.
– ಹರೀಶ್ ನಾಯಕ್, ಉದ್ಯಮಿ ಕಾಪು ಹೆದ್ದಾರಿ ಇಲಾಖೆಗೆ ಮತ್ತೆ ಪತ್ರ ಬರೆಯಲಾಗುವುದು
ಉದ್ಯಾವರದಿಂದ ಉಚ್ಚಿಲದವರೆಗಿನ ಹೆದಾರಿ ಡಿವೈಡರ್ ನಡುವೆ ದ್ವಿಚಕ್ರ ವಾಹನಗಳನ್ನು ನುಗ್ಗಿಸುವ ಹಲವಾರು ಪ್ರದೇಶಗಳಿವೆ. ಇಲ್ಲಿ ಹಿಂದೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದ ಪರಿಣಾಮ ಪೊಲೀಸ್ ಇಲಾಖೆ ಹೆದ್ದಾರಿ ಇಲಾಖೆಗೆ ಪತ್ರ ಬರೆದು ಮಳೆ ನೀರು ಹರಿಯುವ ಪ್ರದೇಶಗಳಲ್ಲಿ ಬೇರೊಂದು ರೀತಿ ಕಾಮಗಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಅದನ್ನು ಕೂಡ ಸ್ಥಳೀಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಿತ್ತು ಹಾಕಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುವುದು ದುರದೃಷ್ಟಕರವಾಗಿದೆ. ಇಂತಹ ಕಡೆಗಳಲ್ಲಿ ಮತ್ತೆ ಸಂಚಾರ ತಡೆಯುವ ಕಾಮಗಾರಿ ನಡೆಸಲು ಹೆದ್ದಾರಿ ಇಲಾಖೆಗೆ ಪತ್ರ ಬರೆದು ವಿನಂತಿಸಲಾಗುವುದು.
-ಮಹೇಶ್ ಪ್ರಸಾದ್, ಕಾಪು ಪೊಲೀಸ್ ವೃತ್ತ ನಿರೀಕ್ಷಕರು -ರಾಕೇಶ್ ಕುಂಜೂರು