Advertisement

ಕಾಳಸಂತೆಯಲ್ಲಿ ಅಕ್ಕಿ ಮಾರಾಟ: ವಾಹನ ಜಪ್ತಿ

03:29 PM Jan 25, 2022 | Team Udayavani |

ಮುದಗಲ್ಲ: ಸಮೀಪದ ಸಜ್ಜಲಗುಡ್ಡ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗಾಗಿ ಸರಕಾರ ವಿತರಣೆ ಮಾಡುತ್ತಿರುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿರುವಾಗ ಅಕ್ಕಿ ಮೂಟೆ ಸಮೇತ ವಾಹನವನ್ನು ಮುದಗಲ್ಲ ಪೊಲೀಸರು ಜಪ್ತಿ ಮಾಡಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.

Advertisement

ಠಾಣಾ ವ್ಯಾಪ್ತಿಯ ಕೊನೆಯ ಪ್ರದೇಶವಾದ ಸಜ್ಜಲಗುಡ್ಡದಲ್ಲಿ ಸರಕಾರದ ವತಿಯಿಂದ ಉಚಿತವಾಗಿ ಅಕ್ಕಿಯನ್ನು ಕುಟುಂಬಕ್ಕೆ ನೀಡಲಾಗುತ್ತಿದೆ. ಆದರೆ, ಅದೇ ಅಕ್ಕಿಯನ್ನು 10 ರೂ. ಕೆ.ಜಿ ಯಂತೆ ನಾಗರಿಕರಿಂದ ಖರೀದಿ ಮಾಡಿಕೊಂಡು ಅದಕ್ಕೆ ಪಾಲಿಷ್‌ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವದು ಸಾಮಾನ್ಯವಾಗಿದೆ.

ಸರಕಾರ ಕೊಟ್ಟ ಅಕ್ಕಿಯನ್ನು ನಾಗರಿಕರಿಗೆ ಹೆಚ್ಚಿನ ಹಣದ ಆಮಿಷ ತೋರಿಸಿ ಅದನ್ನು ಕಾಳಸಂತೆಗೆ ಖರೀದಿಸುವವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next