Advertisement

ಅಕ್ರಮ ಪಡಿತರ ಅಕ್ಕಿ ಜಪ್ತಿ?: ಅಧಿಕಾರಿಗಳಿಂದ ಸ್ಪಷ್ಟನೆ

05:46 PM Jun 03, 2022 | Team Udayavani |

ಹುಮನಾಬಾದ: ಚಿಟಗುಪ್ಪ ತಾಲೂಕಿನ ಮುದ್ದನಾಳ ಗ್ರಾಮದಲ್ಲಿ ಗುರುವಾರ ಹುಮನಾಬಾದ ತಹಶೀಲ್ದಾರರು ಅಕ್ರಮ ಪಡಿತರ ಅಕ್ಕಿ ಗೋದಾಮಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಈವರೆಗೆ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ. ಮುದ್ದನಾಳ ಗ್ರಾಮದ ವಾಲ್ಮೀಕಿ ದೇವಸ್ಥಾನ ಹತ್ತಿರ ಇರುವ ಗೋದಾಮ ಬಳಿ ಹುಮನಾಬಾದ ತಹಶೀಲ್ದಾರರು ದಾಳಿ ನಡೆಸಿದ್ದು, ಲಾರಿಯೊಂದರಲ್ಲಿ ಪಡಿತರ ಅಕ್ಕಿ ಪತ್ತೆಯಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ಆದರೆ, ಎಷ್ಟು ಪ್ರಮಾಣದ ಅಕ್ರಮ ಅಕ್ಕಿ ಸಿಕ್ಕಿದೆ ಮತ್ತು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಚಿಟಗುಪ್ಪ ತಹಶೀಲ್ದಾರರು ರವೀಂದ್ರ ದಾಮಾ ಅವರನ್ನು ವಿಚಾರಿಸಿದರೆ ಯಾವುದೇ ಮಾಹಿತಿ ಗೊತ್ತಾಗಿಲ್ಲ. ಆದರೆ, ಹುಮನಾಬಾದ ತಹಶೀಲ್ದಾರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಸಹಾಯಕ ಆಯುಕ್ತರಾದ ರಮೇಶ ಕೊಳ್ಳಾರ ಮತ್ತು ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಅವರಿಗೆ ವಿಚಾರಿಸಿದರೆ ಈ ಕುರಿತು ಪೂರ್ಣ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ತಿಳಿಸಿದ್ದಾರೆ.

ಈ ಮಧ್ಯೆ ಡಿವೈಎಸ್ಪಿ ಮತ್ತು ತಹಶೀಲ್ದಾರ್‌ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ 70 ರಿಂದ 80 ಅಕ್ರಮ ಪಡಿತರ ಅಕ್ಕಿ ಪತ್ತೆ ಆಗಿರುವುದು ನಿಜ. ಈ ಕುರಿತು ಶುಕ್ರವಾರ ಪ್ರಕರಣ ದಾಖಲು ಮಾಡಲಾಗುವುದು ಎಂದು ಆಹಾರ ಇಲಾಖೆಯ ನಿರೀಕ್ಷರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next