Advertisement

ಬಿಪಿಎಲ್‌ ಕುಟುಂಬಗಳಿಗೆ ಅಕ್ಕಿ, ಬೇಳೆ

12:49 AM May 01, 2020 | Sriram |

ಬೆಂಗಳೂರು: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ ಯಡಿ ಶುಕ್ರವಾರದಿಂದ ರಾಜ್ಯದ ಬಿಪಿಎಲ್‌ ಪಡಿತರದಾರರಿಗೆ ಉಚಿತ ಅಕ್ಕಿ ಮತ್ತು ತೊಗರಿ ಬೇಳೆ ವಿತರಣೆಯಾಗಲಿದೆ.

Advertisement

ಎಪ್ರಿಲ್‌ ಮತ್ತು ಮೇ ತಿಂಗಳ ಪಡಿ ತರ ವಿತರಣೆಯಾಗಲಿದ್ದು, ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ ಐದು ಕೆಜಿಯಂತೆ ಹತ್ತು ಕೆಜಿ ಅಕ್ಕಿ, ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಕೆಜಿ ತೊಗರಿ ಬೇಳೆಯಂತೆ 2 ಕೆಜಿ ಬೇಳೆ ವಿತರಿಸಲಾಗುವುದು. 19 ಜಿಲ್ಲೆಗಳಲ್ಲಿ ಮೇ 1 ಮತ್ತು ಉಳಿದ ಜಿಲ್ಲೆಗಳಲ್ಲಿ ಮೇ 3ರಿಂದ ವಿತರಣೆಯಾಗಲಿದೆ. ಕೇಂದ್ರದಿಂದ 4,31,664 ಮೆ. ಟನ್‌ ಅಕ್ಕಿ, 12,273 ಮೆ. ಟನ್‌ ತೊಗರಿ ಬೇಳೆ ಹಂಚಿಕೆಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next