Advertisement

ಮತ ಪತ್ರ ವ್ಯವಸ್ಥೆಗೆ ಮರಳುವುದು ಹಿನ್ನಡೆ ಕ್ರಮ: ಮಾಜಿ ಸಿಇಸಿ

05:07 PM Mar 19, 2018 | udayavani editorial |

ಹೈದರಾಬಾದ್‌ : ಹಳೆಯ ಮತ ಪತ್ರ ವ್ಯವಸ್ಥೆಗೆ ಮರಳುವುದು ಹಿನ್ನಡೆಯ ಕ್ರಮವಾದೀತು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ ಎಸ್‌ ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.

Advertisement

ವಿದ್ಯುನ್ಮಾನ ಮತಯಂತ್ರಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿದೆ. ಅವುಗಳನ್ನು ತಿರುಚುವುದು ಅಸಾಧ್ಯ. ಆದರೆ ಹಳೆಯ ಮತ ಪತ್ರ ವ್ಯವಸ್ಥೆಯಲ್ಲಿ ಕೈಚಳಕಕ್ಕೆ ಅವಕಾಶವಿದೆ. ಮಾತ್ರವಲ್ಲದೆ ಕಾಗದಗಳ ವ್ಯರ್ಥ ಬಳಕೆ ಮತ್ತು ಫ‌ಲಿತಾಂಶ ಪ್ರಕಟನೆಗೆ ಸುದೀರ್ಘ‌ ಹೊತ್ತು ಮುಂತಾಗಿ ಹಲವಾರು ಬಗೆಯ ಅನನುಕೂಲತೆಗಳಿವೆ ಎಂದವರು ಹೇಳಿದರು. 

ಇವಿಎಂಗಳು ದೇಶದ ಹಮ್ಮೆ ಎಂದು ಹೇಳಿದ ಅವರು ಅವು ಸಂಪೂರ್ಣವಾಗಿ ವಿಶ್ವಾರ್ಸಾಹವಾಗಿವೆ. ಆದರೆ ಕೆಲವು ರಾಜಕೀಯ ಪಕ್ಷಗಳು ಹಳೇ ಮತ ಪತ್ರ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕೆಂದು ಆಗ್ರಹಿಸುತ್ತಿರುವುದು ದುರದೃಷ್ಟಕರ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next