Advertisement

Uppala; ಕಂದಾಯ ಕಚೇರಿ ಉದ್ಯೋಗಿ ಕುಸಿದು ಬಿದ್ದು ಸಾವು

12:17 AM Feb 10, 2024 | Team Udayavani |

ಕುಂಬಳೆ: ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿದ್ದ ಬಾಡೂರು ಕಟ್ಟದಕ್ಕಾಡು ನಿವಾಸಿ ಶಂಕರ ಗೌಡ (56) ಅವರು ಹೃದಯಾಘಾತದಿಂದ ಫೆ. 8ರಂದು ನಿಧನ ಹೊಂದಿದರು.

Advertisement

ಗುರುವಾರ ಸಂಜೆ ಕರ್ತವ್ಯ ಮುಗಿಸಿ ಮರಳುವಾಗ ಕುಸಿದು ಬಿದ್ದ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅವರು ಮುಂದಿನ ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದರು.

ಉದ್ಯೋಗಕ್ಕೆ ಮುನ್ನ ಪುತ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಎಡನಾಡು ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡಿನಿಂದ ಚುನಾಯಿತ ಬಿಜೆಪಿ ಸದಸ್ಯರಾಗಿದ್ದರು. ಧರ್ಮತ್ತಡ್ಕ ಯೂತ್‌ಕ್ಲಬ್‌ ಮತ್ತು ವಾಚನಾಲಯದ ಮಾಜಿ ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಕಂದಾಯ ಅಧಿಕಾರಿಗಳು, ಸಂಘ-ಸಂಸ್ಥೆಯವರು ಶ್ರದ್ಧಾಂಜಲಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next