Advertisement

ಕಂದಾಯ ಕಡತ ವಿಲೇ ವಾರ

01:57 AM Jun 24, 2019 | Sriram |

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ನಿಮ್ಮ ಕಡತಗಳು ಹಲವು ದಿನಗಳಿಂದ ವಿಲೇವಾರಿಯಾಗದೆ ಬಾಕಿ ಉಳಿದಿದೆಯೇ? ಹಾಗಿದ್ದರೆ, ತಕ್ಷಣ ಸಂಬಂಧಿತ ಕಚೇರಿಗೆ ದಾಂಗುಡಿ ಇಡಿ. ಇಂದಿನಿಂದ ಒಂದು ವಾರದಲ್ಲಿ ಅದಕ್ಕೆ ‘ಮುಕ್ತಿ’ ಸಿಗುವ ಸಾಧ್ಯತೆ ಇದೆ.

Advertisement

ಜೂನ್‌ 24ರಿಂದ 30ರವರೆಗೆ ಕಡತ ವಿಲೇವಾರಿ ಸಪ್ತಾಹ ಮಾಡಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದ್ದಾರೆ. ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜೊತೆಗೆ ದೀರ್ಘ‌ ಕಾಲದಿಂದ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲಾಗುವುದು ಮತ್ತು ಕಡತಗಳ ಶೀಘ್ರ ವಿಲೇವಾರಿಯಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಹಾಗೂ ನಿಯಮ ಪಾಲನೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆಯೂ ಕಡತ ವಿಲೇವಾರಿ ಸಪ್ತಾಹ ಮಾಡಿ 2.5 ಲಕ್ಷ ಕಡತಗಳನ್ನು ವಿಲೇವಾರಿ ಮಾಡಲಾಗಿತ್ತು. ಅದರಿಂದ ಪ್ರೇರೇಪಿತರಾಗಿ ಕಂದಾಯ ಇಲಾಖೆಯ ಸಿಬ್ಬಂದಿಗೆ ಈ ಸೂಚನೆ ನೀಡಿದ್ದು, ಕಡತ ವಿಲೇವಾರಿ ಸಪ್ತಾಹದ ಮುಗಿದ ನಂತರ ಜುಲೈ 2ರಂದು ಎಲ್ಲ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next