Advertisement

ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಭಕ್ತರ ದಂಡು; 28 ದಿನದಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು…

09:46 AM Dec 19, 2019 | Nagendra Trasi |

ತಿರುವನಂತಪುರ :  ಮಂಡಲ ಪೂಜೆ ನಡೆಯುತ್ತಿರುವ ಹಿನ್ನೆಲೆ ಎರಡು ತಿಂಗಳ ಕಾಲ ಶಬರಿಮಲೆ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಲಕ್ಷಾಂತರ ಜನರು ದೇವರ ದರ್ಶನ ಪಡೆದಿದ್ದಾರೆ ಎಂದು ದೇವಾಲಯ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.

Advertisement

104 ಕೋಟಿ ಕಾಣಿಕೆ ಸಂಗ್ರಹ:

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಆದಾಯ ಪ್ರಮಾಣ ದುಪ್ಪಟ್ಟುಗೊಂಡಿದ್ದು, ಕಳೆದ ವರ್ಷ ಇದೇ ಅವಧಿಗೆ ದೇವಾಲಯ ಕೇವಲ 64 ಕೋಟಿ ಕಾಣಿಕೆ ಮೊತ್ತವನ್ನು ಸಂಗ್ರಹಿಸಿತ್ತು. ಆದರೆ, ಈ ಬಾರಿ ಕಾಣಿಕೆ ಮೊತ್ತ 28ದಿನಗಳಲ್ಲಿಯೇ ಅಧಿಕ ಮಟ್ಟದಲ್ಲಿ  ಸಂಗ್ರವಾಗಿದ್ದು, ಈವರೆಗೆ 104 ಕೋಟಿ ಕಾಣಿಕೆಯನ್ನು ದೇವಾಲಯ ಸಂಗ್ರಹಿಸಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.

5 ಕೋಟಿ ನಾಣ್ಯ

ಮಕರವಿಲುಕ್ಕು(ಮಕರಜ್ಯೋತಿ) ಪೂಜೆಗಾಗಿ ನ.17ರಂದು ಮಂಡಲ ಪೂಜಾ ವಿಧಿ ಕಾರ್ಯಗಳಿಗಾಗಿ ದೇವಾಲಯವನ್ನು ತೆರೆಯಲಾಗಿತ್ತು. ಈ ಹಿನ್ನಲೆ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಸಲ್ಲಿಸಿದ ಕಾಣಿಕೆ ಮೊತ್ತದಲ್ಲಿ ಸುಮಾರು 5 ಕೋಟಿ ನಾಣ್ಯಗಳು ಸಂಗ್ರಹವಾಗಿದ್ದು, ನ್ಯಾಯಾಲಯದ ಅನುಮತಿ ಬಳಿಕ ನಾಣ್ಯಗಳ ತೂಕದ ಮೌಲ್ಯವನ್ನು ಲೆಕ್ಕ ಹಾಕಲಾಗುವುದು ಎಂದು ದೇವಸ್ವಂ ಬೋರ್ಡ್‌ ತಿಳಿಸಿದೆ. ಅಲ್ಲದೆ ಅನ್ನದಾನ ರೂಪದಲ್ಲಿ ಕೂಡ ಭಕ್ತರು ದೇವಾಲಯಕ್ಕೆ ದೇಣಿಗೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next