Advertisement

ರೇವಣ್ಣ ರಾಜಕೀಯ ನಿವೃತ್ತಿ ಗ್ಯಾರಂಟಿ: ಎ.ಮಂಜು

11:14 PM Apr 13, 2019 | Team Udayavani |

ಚನ್ನರಾಯಪಟ್ಟಣ: ದೇಶಾದ್ಯಂತ ಮೋದಿ ಪರ ಅಲೆ ಇದ್ದು, ಅವರು ಮತ್ತೂಮ್ಮೆ ಪ್ರಧಾನಿಯಾಗುವುದು ಗ್ಯಾರಂಟಿ. ಹಾಗಾಗಿ, ರೇವಣ್ಣ ಅವರ ರಾಜಕೀಯ ನಿವೃತ್ತಿಯೂ ಗ್ಯಾರಂಟಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ವ್ಯಂಗ್ಯವಾಡಿದ್ದಾರೆ.

Advertisement

ತಾಲೂಕಿನ ವಿವಿಧೆಡೆ ಚುನಾವಣಾ ಪ್ರಚಾರ ಕೈಗೊಂಡ ಅವರು, ಜೆಡಿಎಸ್‌ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರು. “ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ರೇವಣ್ಣ ಹೇಳಿದ್ದಾರೆ.

ಮೋದಿ ಮತ್ತೆ ಪ್ರಧಾನಿಯಾಗುವುದು ಅಕ್ಷರಶ: ಸತ್ಯ. ಜೊತೆಗೆ, ರೇವಣ್ಣ ಅವರಿಗೆ ತಾವು ಮಾಡಿರುವ ಅವ್ಯವಹಾರಗಳ ಬಗ್ಗೆ ಅರಿವಾಗಿದ್ದು, ತಾವು ಜೈಲು ಸೇರೋದು ಖಚಿತ ಎಂಬುದು ತಿಳಿದಿದೆ.

ಹಾಗಾಗಿ, ಮೋದಿ ಹೆಸರು ಹೇಳುವ ಮೂಲಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಹಿಂದೆ, ಅವರ ತಂದೆ, ದೇವೇಗೌಡರು, ಇದೇ ರೀತಿ ಹೇಳಿ ರಾಜೀನಾಮೆ ನೀಡದೆ ಮೋದಿಯ ಕಾಲು ಹಿಡಿದು ಕ್ಷಮೆ ಕೇಳಿ ಐದು ವರ್ಷ ಲೋಕಸಭಾ ಸದಸ್ಯರಾಗಿ ಮುಂದುವರಿದಿದ್ದರು’ ಎಂದು ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next