Advertisement

ವಾಲ್ಮೀಕಿ ಸಮುದಾಯದ ಹಣ ಹಿಂದಿರುಗಿಸಿ: ಜೆಡಿಎಸ್‌ ಪತ್ರ

08:14 PM Jun 08, 2024 | Team Udayavani |

ಬೆಂಗಳೂರು: ವಾಲ್ಮೀಕಿ ಸಮುದಾಯದ ಏಳಿಗೆಗೆ ಬಳಕೆಯಾಗಬೇಕಾದ ಹಣವನ್ನು ತೆಲಂಗಾಣದ ಚುನಾವಣ ಖರ್ಚಿಗೆಂದು ರಾಹುಲ್‌ ಗಾಂಧಿ ಅಣತಿ ಮೇರೆಗೆ ಕಳುಹಿಸಿಕೊಡಲಾಗಿದೆ. ಆ ಹಣವನ್ನು ಹಿಂದಿರುಗಿಸುವಂತೆ ಅಲ್ಲಿನ  ಮುಖ್ಯಮಂತ್ರಿಗೆ ಮನವಿ ಮಾಡಿ ಕನ್ನಡಿಗರ ಹೆಸರಿನಲ್ಲಿ ಜೆಡಿಎಸ್‌ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Advertisement

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಗೆ ಬರೆದಿರುವ ಪತ್ರದಲ್ಲಿ, ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂದಿರುಗಿಸಿ. ಈ ಹಣ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಬಳಕೆ ಆಗಬೇಕಿತ್ತು. ಕರ್ನಾಟಕದ ನೀಚ ಸರಕಾರ “ಉಂಡು ಹೋದ ಕೊಂಡು ಹೋದ’ ಎಂಬಂತೆ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಲೂಟಿ ಹೊಡೆದದ್ದಲ್ಲದೆ, ಮಿಕ್ಕ ಹಣವನ್ನು ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್‌ನ ಚುನಾವಣ ಖರ್ಚಿಗೆ ಸಾಗಿಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next