Advertisement

Maharashtra ತೆರಿಗೆ ಪಾಲಿನಲ್ಲಿ ಶೇ.50 ಹಿಂದಿರುಗಿಸಿ: ಕೇಂದ್ರಕ್ಕೆ ಉದ್ಧವ್‌ ಆಗ್ರಹ

12:20 AM Feb 13, 2024 | Team Udayavani |

ಮುಂಬಯಿ: ಕರ್ನಾಟಕ, ಕೇರಳ, ತಮಿಳುನಾಡು ಬಳಿಕ ಈಗ ಮಹಾರಾಷ್ಟ್ರದಲ್ಲೂ ಕೇಂದ್ರದ ವಿರುದ್ಧ ಕರ ಸಮರ ಆರಂಭವಾಗುವ ಸುಳಿವು ದೊರೆತಿದೆ. ತೆರಿಗೆಯಾಗಿ ಮಹಾರಾಷ್ಟ್ರದಿಂದ ಸಂಗ್ರಹಿಸಿ­ರುವ ಹಣದಲ್ಲಿ ಶೇ.50 ರಷ್ಟನ್ನು ಹಿಂದಿರುಗಿಸಬೇಕು ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್‌ ಠಾಕ್ರೆ ಕೇಂದ್ರ ಸರಕಾರ ವನ್ನು ಆಗ್ರಹಿಸಿದ್ದಾರೆ.

Advertisement

ಮುಂಬಯಿಯಲ್ಲಿ ಮಾತನಾಡಿದ ಉದ್ಧವ್‌, ತೆರಿಗೆ ಪಾಲಿನ ಅಸಮರ್ಪಕ ಹಂಚಿಕೆ ವಿರುದ್ಧ ಕರ್ನಾಟಕ, ಕೇರಳದಂತ ದಕ್ಷಿಣ ಭಾರತದ ರಾಜ್ಯಗಳು ಹೊಸದಿಲ್ಲಿಯಲ್ಲಿ ಪ್ರತಿಭಟನ ರ್ಯಾಲಿ ನಡೆಸಿವೆ. ತೆರಿಗೆ ಯಾಗಿ ಕೇಂದ್ರಕ್ಕೆ ಮಹಾರಾಷ್ಟ್ರ 1 ರೂಪಾಯಿ ನೀಡಿದರೆ, ಅದರಲ್ಲಿ ಕೇವಲ 7 ಪೈಸೆ ಮಾತ್ರ ವಾಪಸ್‌ ಬರುತ್ತಿದೆ ಎಂದು ಕೇಂದ್ರದ ವಿರುದ್ಧ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next