Advertisement

ಬಿಲ್ಲವರ ಅಸೋಸಿಯೇಶನ್‌ ಸಂಚಾಲಿತ ಭಾರತ್‌ ಬ್ಯಾಂಕ್‌ ಸಿಬಂದಿ ನಿವೃತ್ತಿ

02:26 PM Jul 05, 2021 | Team Udayavani |

ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಸಂಚಾಲಿತ ಭಾರತ್‌ ಕೋ – ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಇದರ ನಾಲ್ವರು ಅಧಿಕಾರಿಗಳು ಸೇವಾ

Advertisement

ನಿವೃತ್ತಿ ಹೊಂದಿದರು.

ಭಾರತ್‌ ಬ್ಯಾಂಕ್‌ ಕೇಂದ್ರ ಕಚೇರಿಯ ಮಹಾ ಪ್ರಬಂಧಕ ವಾಸುದೇವ ಎಂ. ಸಾಲ್ಯಾನ್‌ ಅವರು 37 ವರ್ಷಗಳ ಸೇವಾವಧಿ  ಬಳಿಕ, ಕುರ್ಲಾ ಪಶ್ಚಿಮ ಶಾಖೆಯ ಸಹಾಯಕ ಮಹಾ ಪ್ರಬಂಧಕ ರಮೇಶ್‌ ಎಚ್‌. ಪೂಜಾರಿ ಅವರು 37 ವರ್ಷಗಳ ಸೇವಾವಧಿ

ಬಳಿಕ, ಪೊವಾಯಿ ಶಾಖೆಯ ಪ್ರಬಂಧಕ ಪ್ರಕಾಶ್‌ ಆರ್‌. ಅಮೀನ್‌ ಅವರು 35 ವರ್ಷಗಳ ಸೇವಾವಧಿ ಬಳಿಕ ಹಾಗೂ ದಹಿಸರ್‌ ಶಾಖೆಯ ಅಧಿಕಾರಿ ಕೃಷ್ಣಪ್ಪ ಎಸ್‌. ಪೂಜಾರಿ ಅವರು 32 ವರ್ಷಗಳ ಸೇವಾವಧಿ ಬಳಿಕ ಜೂ. 30ರಂದು ನಿವೃತ್ತಿ ಹೊಂದಿದ್ರು. ಇದೇ ದಿನ ಇವರಿಗೆ ವಿದಾಯ ಕಾರ್ಯಕ್ರಮವನ್ನು ಗೋರೆಗಾಂವ್‌ ಪೂರ್ವದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ವಿದ್ಯಾನಂದ ಎಸ್‌. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್‌ ಬಿ. ಸಾಲ್ಯಾನ್‌, ಮುಖ್ಯ ಮಾಹಿತಿ ಅಧಿಕಾರಿ ನಿತ್ಯಾನಂದ ಎಸ್‌. ಕಿರೋಡಿಯನ್‌, ಮಹಾ ಪ್ರಬಂಧಕರಾದ ಮಹೇಶ್‌ ಬಿ. ಕೋಟ್ಯಾನ್‌, ವಿಶ್ವನಾಥ ಜಿ. ಸುವರ್ಣ, ಉಪ ಮಹಾ ಪ್ರಬಂಧಕರು, ಸಹಾಯಕ ಮಹಾ ಪ್ರಬಂಧಕರು ಮತ್ತು ಸಿಬಂದಿ ಉಪಸ್ಥಿತರಿದ್ದು, ನಿವೃತ್ತರ ಮುಂದಿನ ಬದುಕಿಗೆ ಶುಭ ಹಾರೈಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next