Advertisement

ಮದ, ಮಾದಕ ವ್ಯಸನ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿ.ಟಿ. ರವಿ

09:25 PM Dec 26, 2022 | Team Udayavani |

ಬೆಳಗಾವಿ: ನಾನು ನಿತ್ಯ ಗಾಂಜಾ ಹಾಗೂ ಮದ್ಯ ಸೇವಿಸುತ್ತೇನೆಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಹರಿಪ್ರಸಾದ್‌ ಆರೋಪಿಸಿದ್ದಾರೆ. ಈ ಬಗ್ಗೆ ನನ್ನ ರಕ್ತ ಪರೀಕ್ಷೆ ಮಾಡಲಿ. ನಾನು ಗಾಂಜಾ, ಮದ್ಯ ಸೇವನೆ ಮಾಡುತ್ತಿರುವುದನ್ನು ಸಾಬೀತು ಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲವಾದರೆ ಹರಿಪ್ರಸಾದ್‌ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅಂತಹ ಯಾವ ಹವ್ಯಾಸಗಳೂ ಇಲ್ಲ. ಈ ಬಗ್ಗೆ ಪರೀಕ್ಷೆಗೆ ಒಳಪಡಲು ನಾನು ಸಿದ್ಧ. ನಾನು ವ್ಯಸನಿ ಎಂದು ಆರೋಪಿಸುವವರು ನನ್ನೊಂದಿಗೆ ಓಡಲು ಮುಂದಾಗಲಿ. ವೈಚಾರಿಕ ಹಾಗೂ ರಾಜಕೀಯವಾಗಿ ಎದುರಿಸಲಾಗದವರು ನನ್ನ ವಿರುದ್ಧ ಇಂಥ ಕೀಳು ಮಟ್ಟದ ಆರೋಪ ಮಾಡುತ್ತಿದ್ದು, ಅವರು ತಮ್ಮ ಚರಿತ್ರೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next