Advertisement

ಗ್ರಾ.ಪಂ ಚುನಾವಣೆ: ಸೋದರ ಸಂಬಂಧಿಯನ್ನೇ ಸೋಲಿಸಿದ ನಿವೃತ್ತ ಪೊಲೀಸ್ ಅಧಿಕಾರಿ

04:51 PM Dec 30, 2020 | Team Udayavani |

ವಿಜಯಪುರ: ಜಿಲ್ಲೆಯ ವಿವಿಧ ಠಾಣೆಗಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಎಸ್ ಐ ಒಬ್ಬರ ಚುನಾವಣೆಯಲ್ಲಿ ಸೋದರ ಸಂಬಂಧಿಯನ್ನೇ ಸೋಲಿಸಿ ಗ್ರಾಮ ಪಂಚಾಯತ್ ಗೆ ಆಯ್ಕೆಯಾಗಿದ್ದಾರೆ.

Advertisement

ಚಡಚಣ ತಾಲ್ಲೂಕಿನ ಹಲಸಂಗಿ ಗ್ರಾ.ಪಂ. ವ್ಯಾಪ್ತಿಯ ನಂದ್ರಾಳ ಗ್ರಾಮದ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿವೃತ್ತ ಎಎಸ್ ಐ ಶಿವರಾಯ ಶ್ರೀಶೈಲ ಭತಗುಣಕಿ 349 ಮತಗಳನ್ನು ಪಡೆದು, ಹತ್ತಿರದ‌ ಸಹೋದರ ಸಂಬಂಧಿಯನ್ನು 140 ಮತಗಳಿಂದ ಸೋಲಿಸಿ ವಿಜಯ ಸಾಧಿಸಿದ್ದಾರೆ.

ವಿಜಯಪುರ ಗ್ರಾಮೀಣ ಠಾಣೆ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಶಿವರಾಯ ನಾಲ್ಕು ತಿಂಗಳ ಹಿಂದೆ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಬಳಿಕ ಗ್ರಾ.ಪಂ. ಚುನಾವಣೆ ಅಖಾಡಕ್ಕಿಳಿದ್ದರು. ಇದೀಗ ವಿಜಯ ಸಾಧಿಸುವ ಮೂಲಕ ನಿವೃತ್ತ ಜೀವನವನ್ನು ಜನಪ್ರತಿನಿಧಿಯಾಗಿ ರಾಜಕೀಯ ರಂಗದಲ್ಲಿ ಕಳೆಯಲು‌ ಮುಂದಾಗಿದ್ದಾರೆ.

ಇದನ್ನೂ ಓದಿ:ತಾಲೂಕು ಪಂಚಾಯತಿ ಸದಸ್ಯೆಗೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲು!

ತಮ್ಮ ವಿರುದ್ಧ ಹತ್ತಿರದ ಸಹೋದರ ಸಂಬಂಧಿಯೇ ಪರಾಭವಗೊಂಡಿದ್ದು ಸಂಭ್ರಮ ಆಚರಿಸದಿರಲು ನಿರ್ಧರಿಸಿದ್ದಾಗಿ ಉದಯವಾಣಿ ಪತ್ರಿಕೆಗೆ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next