Advertisement

ಶ್ರೀನಗರ : ಪ್ರತ್ಯೇಕತಾವಾದಿಗಳ ಜಾಥಾ ತಡೆಗೆ ವ್ಯಾಪಕ ನಿರ್ಬಂಧ

12:03 PM Dec 15, 2017 | udayavani editorial |

ಶ್ರೀನಗರ : ಪ್ರತ್ಯೇಕತಾವಾದಿಗಳು ದಕ್ಷಿಣ ಕಾಶ್ಮೀರದ ಜನರೊಂದಿಗೆ ಒಗ್ಗಟ್ಟು ತೋರ್ಪಡಿಸುವ ಸಲುವಾಗಿ ನಡೆಸಲು ಉದ್ದೇಶಿಸಿರುವ ಜಾಥಾವನ್ನು ವಿಫ‌ಲಗೊಳಿಸಲು ಪೊಲೀಸರು ಇಂದು ಶುಕ್ರವಾರ ಶ್ರೀನಗರದ ವಿವಿಧ ಭಾಗಗಳಲ್ಲಿ ಮತ್ತು ಅನಂತನಾಗ್‌ ಪಟ್ಟಣದಲ್ಲಿ ನಿರ್ಬಂಧಗಳನ್ನು ವಿಧಿಸಿದರು.

Advertisement

ಶ್ರೀನಗರ ಮತ್ತು ಅನಂತನಾಗ್‌ ಪಟ್ಟಣದ ಒಟ್ಟು ಏಳು ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು. 

ಸಫಾಕದಲ್‌, ನೌಹಟ್ಟಾ, ರೈನಾವಾರಿ, ಖಾನ್ಯಾರ್‌ ಮತ್ತು ಎಂ ಆರ್‌ ಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ  ಸೆ.144 ಹೇರಲಾಗಿದೆ ಎಂದವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next