Advertisement

ಕೆಆರ್‍ಎಸ್ ಸಂಪೂರ್ಣ ಭರ್ತಿ: ನಿಮಿಷಾಂಭ ದೇಗುಲದ ಬಳಿ‌ ನದಿಗೆ ಭಕ್ತರ ಪ್ರವೇಶ ನಿರ್ಬಂಧ

10:56 AM Nov 18, 2021 | Team Udayavani |

ಶ್ರೀರಂಗಪಟ್ಟಣ: ಕೆ‌‌.ಆರ್‌.ಎಸ್ ಸಂಪೂರ್ಣ ಭರ್ತಿಯಾಗಿದ್ದು,ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಒಳಹರಿವು ಇದೆ. ಇದರಿಂದಾಗಿ ಡ್ಯಾಂ ನಿಂದ ಕಾವೇರಿ ನದಿಗೆ ಹೆಚ್ಚುವರಿ‌ ನೀರು ಬಿಡಲಾಗಿದೆ. ಡ್ಯಾಂ ನಿಂದ ಸುಮಾರು 20ಸಾವಿರ ಕ್ಯೂಸೆಕ್ ಗೂ ಹೆಚ್ಚಿನ ನೀರು‌ ನದಿಗೆ ಹರಿಯ ಬಿಡಲಾಗಿದ್ದು, ಇದರಿಂದಾಗಿ ಡ್ಯಾಂ ನ ಕೆಳಭಾಗದ ಪ್ರದೇಶವಾದ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಉಕ್ಕಿ ಹರಿಯಿತ್ತಿದ್ದು ಹಲವೆಡೆ ನದಿ ಪಾತ್ರದ ರೈತರ ಜಮೀನು ಜಲಾವೃತವಾಗಿದೆ. ಅಲ್ಲದೇ ಜನರಿಗೆ ಪ್ರವಾಹ ಭೀತಿಯ ಆತಂಕ ಎದುರಾಗಿದೆ.

Advertisement

ನಿಮಿಷಾಂಭ ದೇಗುಲದ ಬಳಿ‌ ನದಿಗೆ ಭಕ್ತರ ಪ್ರವೇಶ ನಿರ್ಬಂಧ

ಗಂಜಾಮ್ ಬಳಿ ಕಾವೇರಿ ನದಿ ದಂಡೆಯ ಮೇಲಿರುವ ಶ್ರೀ ನಿಮಿಷಾಂಭ ದೇವಾಲಯದ ಸಮೀಪ ನದಿ ನೀರು ಉಕ್ಕಿ ಹರಿಯುತ್ತಿದ್ದು, ದೇಗುಲದ ಬಳಿ ನದಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ನದಿ ಬಳಿ ತೆರಳದಂತೆ ದೇಗುಲದ ಮುಂಭಾಗವಿರುವ ಸ್ನಾನ ಘಟ್ಟಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next