Advertisement

ರೈಲು ಸಂಚಾರ ಪುನಾರಂಭಿಸಿ

02:49 PM Nov 25, 2021 | Shwetha M |

ಇಂಡಿ: ಕೋವಿಡ್‌ ಕಾರಣದಿಂದ ಕಳೆದ ಒಂದುವರೆ ವರ್ಷದಿಂದ ಸ್ಥಗಿತವಾದ ರೈಲು ಸಂಚಾರವನ್ನು ಪ್ರಯಾಣಿಕರಿಗೆ ಅನುಕೂಲವಾಗಲು ಪುನಾರಂಭಿಸಬೇಕೆಂದು ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರು ಇಂಡಿ ರೈಲು ನಿಲ್ದಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಜೆಡಿಎಸ್‌ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ಹುಬ್ಬಳ್ಳಿ, ಗದಗ, ವಿಜಯಪುರ ಮಾರ್ಗದ ರೈಲುಗಳು ಆರಂಭಿಸಬೇಕು. ಕೊರೊನಾ ನಿಯಂತ್ರಣಕ್ಕೆ ಬಂದಿದ್ದು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅದಲ್ಲದೆ ನಿಂಬೆ, ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರಿಗೆ ರೈಲು ಪ್ರಯಾಣದಿಂದ ಅನುಕೂಲ ಇದೆ ಎಂದರು.

ಸಿದ್ದು ಡಂಗಾ, ಮಹಿಬೂಬ ಬೇವನೂರ, ಬಾಳು ರಾಠೊಡ, ರಾಜು ಮುಲ್ಲಾ, ನಿಯಾಜ್‌ ಅಗರಖೇಡ, ಆರೀಫ್‌ಜಮಾದಾರ, ಸದ್ದಾಂಕೊಟ್ನಾಳ, ಉಮರ ಬಾಗವಾನ, ರವಿ ಶಿಂಧೆ, ಇರ್ಫಾನ್‌ ಅಗರಖೇಡ, ಫಿರೋಜ್‌ ಶೇಖ, ರೇವಪ್ಪ ಹೂಗಾರ, ಮಾಳಪ್ಪ ಶಿರಶ್ಯಾಡ, ರಮೇಶ ಪರಗೊಂಡ, ಶಬ್ಬೀರ್‌ ಮುಲ್ಲಾ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next