Advertisement

“ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ನೆಮ್ಮದಿ’

01:00 AM Mar 11, 2019 | Harsha Rao |

ಮಂಜೇಶ್ವರ: ಭಾರತೀಯ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಕ್ಕೆ ಮಹತ್ವವಿದ್ದು, ಈ ಪೈಕಿ ಗೃಹಸ್ಥಾಶ್ರಮ ಧರ್ಮ ಸರ್ವ ವಿಧದಿಂದಲೂ ಮಹತ್ವದ್ದಾದುದು. ಕೌಟುಂಬಿಕ ವ್ಯವಸ್ಥೆಗಳ ಜೊತೆಗೆ ಸಮಾಜಮುಖೀಯಾಗಿ ಸಲ್ಲಿಸಬೇಕಾದ ಕರ್ತವ್ಯಗಳ ಬಗೆಗೂ ಪ್ರತಿಯೊಬ್ಬ ಗೃಹಸ್ಥ ಜವಾಬ್ದಾರಿಯುತರಾಗಿ ಕಾರ್ಯನಿರ್ವಹಿಸಿದಾಗ ಸಾಮಾಜಿಕ ಕ್ಲೇಶ ರಹಿತವಾದ ನೆಮ್ಮದಿ ಪ್ರಾಪ್ತಿಯಾಗುವುದು ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ತಿಳಿಸಿದರು.

Advertisement

ಪಾವೂರು ಕೊಪ್ಪಳದ ಶ್ರೀ ಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಸಾನಿಧ್ಯ ವೃದ್ಧಿಗಾಗಿ ನಡೆಯುತ್ತಿರುವ 48 ದಿನಗಳ ಉದಯಾಸ್ತಮಾನ ಮೌನ ನಾಮಜಪ ಕಾರ್ಯಕ್ರಮದ ಐದನೇ ದಿನವಾದ ಶನಿವಾರ ಸಂಜೆ ನಡೆದ ಸತ್ಸಂಗದಲ್ಲಿ ಅವರು ಮಾತನಾಡಿದರು.

ಆರಾಧನಾಲಯಗಳು ಶಕ್ತಿ ಕೇಂದ್ರಗಳಾಗಿ ಸನಾತನತೆಯ ಸಂರಕ್ಷಣೆ ಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಧನಾತ್ಮಕ ಚೈತನ್ಯ ವೃದ್ಧಿಯಲ್ಲಿ ದೇವಾಲಯಗಳ ಪುನಶ್ಚೇತನ ಅಗತ್ಯ ಎವಿದ್ದು, ಜನರು ಪರಸ್ಪರ ಕೈಜೋಡಿಸಿ ಶ್ರದ್ಧಾ ಕೇಂದ್ರಗಳ ಸಾನ್ನಿಧ್ಯ ವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಾಮಾಜಿಕ, ಧಾರ್ಮಿಕ ಮುಂದಾಳು ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಂಘಟನಾ ಶಕ್ತಿಯು ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ನೆರವಾಗುತ್ತದೆ. ವೈಯುಕ್ತಿಕ ಆಶೋತ್ತರಗಳತ್ತ ವಾಲದೆ, ಸಮಾಜಮುಖೀ ಚಿಂತನೆ, ಧಾರ್ಮಿಕ-ಆಧ್ಯಾತ್ಮಿಕ ಸಾನ್ನಿಧ್ಯಗಳ ಅಭಿವೃದ್ಧಿಗೆ ಬದುಕನ್ನು ತೆರೆಸಿಕೊಂಡಾಗ ತೃಪ್ತಿಯ ಸಾರ್ಥಕತೆ ಮೂಡುತ್ತದೆ ಎಂದು ತಿಳಿಸಿದರು.

ಸಾಮಾಜಿಕ, ಧಾರ್ಮಿಕ ನೇತಾರ ಗೋಪಾಲ ಶೆಟ್ಟಿ ಅರಿಬೈಲು, ಐತ್ತಪ್ಪ ಉದ್ಯಾವರಗುತ್ತು, ಪಾವೂರು ಬಜಾಲಿನ ಶ್ರೀ ಚಾಮುಂಡೇಶ್ವರಿ ಆಡಳಿತ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಕದೊRàರಿ, ಸಂಜೀವ ಶೆಟ್ಟಿ ಮಾಡ, ಸುಬ್ಬ ಗುರುಸ್ವಾಮಿ ಪಾವೂರು, ಪತ್ರಕರ್ತ ಪುರುಷೋತ್ತಮ ಭಟ್‌ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕುಶಾಲಾಕ್ಷಿ ಕಾನದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

Advertisement

ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನೆರವೇರಿತು. ಮಂಜೇಶ್ವರ ಉದ್ಯಾವರ ಗುತ್ತಿನ ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next