Advertisement

ಸೋಲಿನ ಭೀತಿಯಿಂದ ಸ್ಪೀಕರ್‌ ಬಗ್ಗೆ ಆಕ್ಷೇಪ 

06:25 AM May 19, 2018 | |

ಬೆಂಗಳೂರು: ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್‌ ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ ನೇಮಕದ ಬಗ್ಗೆ
ಆಕ್ಷೇಪ ತೆಗೆದಿದೆ. ಬಿಜೆಪಿ ಪರ 120ಕ್ಕೂ ಹೆಚ್ಚು ಶಾಸಕರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಜಿ.ಬೋಪಯ್ಯ ಈ ಹಿಂದೆಯೂ ಉಪ ಸಭಾಧ್ಯಕ್ಷರು ಹಾಗೂ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಹಿಂದಿನ ಕೇಂದ್ರದ ಯುಪಿಎ ಸರ್ಕಾರವೇ ನೇಮಿಸಿದ್ದ ಹಂಸರಾಜ್‌ ಭಾರದ್ವಾಜ್‌ ಅವರು ರಾಜ್ಯಪಾಲ ರಾಗಿದ್ದ ಸಂದರ್ಭದಲ್ಲೇ ಬೋಪಯ್ಯ ಸ್ಪೀಕರ್‌ ಆಗಿ ನೇಮಕ
ವಾಗಿದ್ದರು. ಆಗ ತಕರಾರು ತೆಗೆಯದ ಕಾಂಗ್ರೆಸ್‌ನವರು ಈಗೇಕೆ ಹೀಗಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ.

ಸೋಲಿನ ಭೀತಿಯಿಂದ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಅವರ ಮಾನಸಿಕತೆಯೇ ಅರ್ಥವಾಗುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು. ಸುಪ್ರೀಂಕೋರ್ಟ್‌ ಸೂಚನೆಯಂತೆ ರಾಜ್ಯಪಾಲರು ಕಾನೂನಿನ ಅಡಿಯಲ್ಲಿ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿದ್ದಾರೆ. ಆದರೆ ಸದನ ಎದುರಿಸುವ ಧೈರ್ಯವಿಲ್ಲದೆ ಶಾಸಕರು ಸದನಲ್ಲಿ
ಇರುತ್ತಾರೋ ಇಲ್ಲವೋ ಎಂಬ ಆತಂಕದಿಂದ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next