Advertisement

ಕೆಯ್ಯೂರಿನ ಕುಟುಂಬಕ್ಕೆ ಧನ ಸಹಾಯ, ವಿದ್ಯಾಭ್ಯಾಸಕ್ಕೆ ನೆರವು 

11:09 AM Dec 20, 2018 | |

ಕೆಯ್ಯೂರು: ಕೆಯ್ಯೂರು ಗ್ರಾಮದ ದಲಿತ ಕುಟುಂಬವೊಂದರ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ಸಂಕಷ್ಟದ ಜೀವನದ ಕುರಿತು ಬುಧವಾರ ‘ಉದಯವಾಣಿ’ ಸುದಿನದಲ್ಲಿ ‘ಹೆತ್ತವರಿಲ್ಲದ ನಾಲ್ವರು ಹೆಣ್ಣು ಮಕ್ಕಳಿಗೆ ಸೂರೂ ಇಲ್ಲ’ ಎನ್ನುವ ತಲೆಬರಹದಡಿಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದನೆ ದೊರೆತಿದ್ದು, ಆ ಕುಟುಂಬಕ್ಕೆ ಧನ ಸಹಾಯ, ವಿದ್ಯಾಭ್ಯಾಸಕ್ಕೆ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದಾರೆ.

Advertisement

10 ಸಾವಿರ ರೂ. ನೆರವು
ಹೆಸರು ತಿಳಿಸಲು ಇಚ್ಛಿಸದ ದಾನಿಯೊಬ್ಬರು ಪರಿಚಿತರ ಮೂಲಕ ಈ ಬಡ ಕುಟುಂಬಕ್ಕೆ 10 ಸಾವಿರ ರೂ. ಧನಸಹಾಯ ನೀಡಿದ್ದಾರೆ. ಜತೆಗೆ ಮನೆ ನಿರ್ಮಾಣಕ್ಕೆ ತನ್ನಿಂದಾದ ಸಹಕಾರವನ್ನೂ ನೀಡುವುದಾಗಿಯೂ ಅವರು ಭರವಸೆ ಇತ್ತಿದ್ದಾರೆ. 10 ಸಾವಿರ ರೂ. ನಗದನ್ನು ನಾಲ್ವರು ಹೆಣ್ಣುಮಕ್ಕಳ ಅಜ್ಜಿ ಭಾಗೀರಥಿ ಅವರಿಗೆ ಹಸ್ತಾಂತರಿ ಸಲಾಯಿತು. ಪದವಿ ವ್ಯಾಸಂಗ ಮಾಡುತ್ತಿರುವ ನೇತ್ರಾ ಅವರ ಒಂದು ವರ್ಷದ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಬೆಂಗಳೂರಿನ ವಿದ್ಯಾಮಾತಾ ಫೌಂಡೇಶನ್‌ ಅಧ್ಯಕ್ಷ ಭಾಗೇಶ್‌ ರೈ ತಿಳಿಸಿದ್ದಾರೆ. ವರದಿ ಗಮನಿಸಿದ ಅವರು, ವಾರದೊಳಗೆ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ‘ಉದಯವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.

ಪಿಂಚಣಿ ಬಂದರೆ ಊಟ
ಧನಸಹಾಯ ಸ್ವೀಕರಿಸಿದ ಬಳಿಕ ಭಾಗೀರಥಿ ಅವರು ಮಾತನಾಡಿ, ತನಗೆ ಪಿಂಚಣಿ ರೂಪದಲ್ಲಿ ತಿಂಗಳಿಗೆ 600 ರೂ. ಬರುತ್ತದೆ (ಈಗ ಅದು 1,000 ರೂ.ಗೆ ಹೆಚ್ಚಳವಾಗಿದೆ. ಅದಿನ್ನೂ ಕೈಸೇರಿಲ್ಲ). ಆ ಸಂದರ್ಭದಲ್ಲಿ ಅಂಗಡಿಯಿಂದ ಅಕ್ಕಿ ತಂದು ಮನೆಯಲ್ಲಿರುವ ನಾವು ಹೊಟ್ಟೆ ತುಂಬಾ ಊಟ ಮಾಡುತ್ತೇವೆ. ಉಳಿದ ದಿನ ಪಡಿತರ ಅಂಗಡಿಯ ಬಿಳಿ ಅಕ್ಕಿಯ ಊಟವನ್ನೇ ಮಾಡುತ್ತೇವೆ. ಈ ಧನ ಸಹಾಯದಿಂದ ಒಪ್ಪೊತ್ತಿನ ಊಟಕ್ಕೆ ಸಹಾಯ ಆಯಿತು ಎಂದವರು ಆನಂದ ಬಾಷ್ಪದೊಂದಿಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next