Advertisement

ರಿಷಭ್‌ ಪಂತ್‌ ನಾಯಕ್ವವನ್ನು ಗೌರವಿಸುವೆ: ಶ್ರೇಯಸ್‌ ಐಯ್ಯರ್‌

09:34 PM Sep 23, 2021 | Team Udayavani |

ದುಬೈ: ರಿಷಭ್‌ ಪಂತ್‌ ಅವರನ್ನು ನಾಯಕನನ್ನಾಗಿ ನೇಮಿಸಿರುವುದು ಫ್ರಾಂಚೈಸಿಯ ನಿರ್ಧಾರ. ನಾಯಕತ್ವದಲ್ಲಿ ಅವರನ್ನೇ ಮುಂದುವರಿಸಿದರೂ ಮುಕ್ತ ಮನಸ್ಸಿನಿಂದ ಗೌರವಿಸುತ್ತೇನೆಂದು ಡೆಲ್ಲಿ ಕ್ಯಾಪಿಟಲ್ಸ್  ತಂಡದ ಮಾಜಿ ನಾಯಕ ಶ್ರೇಯಸ್‌ ಐಯ್ಯರ್‌ ಹೇಳಿದ್ದಾರೆ.

Advertisement

ಬುಧವಾರ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಐಯ್ಯರ್‌ ನಾನು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನಾದಾಗ ನನ್ನ ಮನಸ್ಸು ವಿಭಿನ್ನವಾಗಿತ್ತು. ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಮನೋಧರ್ಮದ ಮಟ್ಟ ಉತ್ತಮವಾಗಿತ್ತು. ಕಳೆದ ಎರಡು ವರ್ಷಗಳಿಂದ ಇದು ನನಗೆ ಸಹಾಯವಾಗಿದೆ. ಆದರೆ, ಪಂತ್‌ಗೆ ನಾಯಕತ್ವ ನೀಡಿರುವುದು ಫ್ರಾಂಚೈಸಿಯ ನಿರ್ಧಾರ. ಆದ್ದರಿಂದ ಪಂತ್‌ ನಾಯಕನಾಗಿ ಮುಂದುವರಿಸುವ ತೀರ್ಮಾನವನ್ನು ನಾನು ಗೌರವಿಸುತ್ತೇನೆ ಎಂದರು.

2021ರ ಆವೃತ್ತಿಯ ಐಪಿಎಲ್‌ ಕೂಟ ಆರಂಭವಾದಾಗಿನಿಂದಲೂ ಪಂತ್‌ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಈ ಕಾರಣದಿಂದಲೇ ಫ್ರಾಂಚೈಸಿ ಅವರನ್ನು ನಾಯಕನಾಗಿ ಮುಂದುವರಿಸಿದೆ. ಇದನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಬ್ಯಾಟಿಂಗ್‌ ಮೇಲೆ ಗಮನ ಕೇಂದ್ರಿಕರಿಸುವ ವಿಚಾರದಲ್ಲಿ ನನ್ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಒತ್ತಡವನ್ನು ನಾನು ಇಷ್ಟಪಡುತ್ತೇನೆ. ಏಕೆಂದರೆ ಒತ್ತಡವಿದ್ದಾಗ ನಾವು ಖಂಡಿತಾ ಉತ್ತಮ ಪ್ರದರ್ಶನ ತೋರುತ್ತೇವೆ ಎಂದು ಶ್ರೇಯಸ್‌ ಐಯ್ಯರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next