Advertisement

ಶ್ರೀಪಾದರಿಂದ ಮಠದ ಪೀಠಕ್ಕೆ ಗೌರವ, ಮೌಲ್ಯವರ್ಧನೆ: ಸಂಧ್ಯಾ ಎಸ್‌.ಪೈ

09:53 AM Mar 28, 2020 | mahesh |

ಉಡುಪಿ: ಮಧ್ವಾಚಾರ್ಯರ ಬಳಿಕ ಗುರುಪರಂಪರೆಯಂತೆ ಸುಬ್ರಹ್ಮಣ್ಯ ಮಠದ ನಲವತ್ತನೇ ಅಧಿಪತಿಯಾಗಿ ಶ್ರೀ ವಿದ್ಯಾಪ್ರಸನ್ನತೀರ್ಥರು ಪೀಠವನ್ನು ಅಲಂಕರಿಸಿದರು. ಶ್ರೀಪಾದರು ಹೆಸ ರಿಗೆ ತಕ್ಕಂತೆ ಹಸನ್ಮುಖೀಯಾಗಿರುವ ಸುಪ್ರಸನ್ನರು. ಅವರು ಮಠದ ಪೀಠಕ್ಕೆ ಗೌರವ, ಮೌಲ್ಯವರ್ಧನೆ ತಂದುಕೊಟ್ಟವರು ಎಂದು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಹೇಳಿದರು.

Advertisement

ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಕುರಿತಾಗಿ “ತರಂಗ’ ಹೊರತಂದ “ಸುಪ್ರಸನ್ನ’ ವಿಶೇಷ ಸಂಚಿಕೆಯನ್ನು ಮಣಿಪಾಲದ ಗೀತಾಮಂದಿರದಲ್ಲಿ ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ಶ್ರೀಪಾದರು ಸರಳ ಮತ್ತು ಸುಂದರ ಮಾತುಗಳಿಂದ ದುಶ್ಚಟಗಳ ದಾಸರಾದವರನ್ನು ಸನ್ಮಾರ್ಗಕ್ಕೆ ಕರೆತರುವವರು. ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ ವಿದ್ಯಾರ್ಥಿಗಳಿಗೆ ಪುಸ್ತಕ, ಅನ್ನದಾಸೋಹ, ಸಾರಿಗೆ ವ್ಯವಸ್ಥೆ ಮಾಡಿ ಶಿಕ್ಷಣದ ಬಗ್ಗೆ ತಮಗಿರುವ ಕಳಕಳಿಯನ್ನು ಕಾರ್ಯರೂಪದಲ್ಲಿ ವ್ಯಕ್ತಪಡಿಸಿರುವರು. ಚಿಕಿತ್ಸಾಲಯ, ಸಂಸ್ಕೃತ ಭಾಷಾಭಿವೃದ್ಧಿ, ಯೋಗಾಭ್ಯಾಸ ಪ್ರಚಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ತಪಸ್ಸಿನಂತೆ ನಡೆಸಿಕೊಂಡು ಬಂದಿರುವರು ಎಂದರು.

ಎಂಎಂಎನ್‌ಎಲ್‌ ಸಿಇಒ ವಿನೋದ್‌ಕುಮಾರ್‌, ಫೈನಾನ್ಸ್‌ ಡಿಜಿಎಂ ಸುದರ್ಶನ್‌ ಶೇರಿಗಾರ್‌, ವ್ಯಾಪಾರ ಅಭಿವೃದ್ಧಿ ಡಿಜಿಎಂ ಸತೀಶ್‌ ಶೆಣೈ, ಮಂಗಳೂರು ಮಾರ್ಕೆಟಿಂಗ್‌ ವಿಭಾಗದ ಸೀನಿಯರ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ಉಪಸ್ಥಿತರಿದ್ದರು.

ಈ ವಾರ “ತರಂಗ’ ವಾರಪತ್ರಿಕೆ ಜತೆ ಉಚಿತವಾಗಿ “ಸುಪ್ರಸನ್ನ’ ವಿಶೇಷ ಸಂಚಿಕೆಯು “ತರಂಗ’ ಓದುಗರಿಗೆ ದೊರಕಲಿದೆ.

ಸರಳ ಬಿಡುಗಡೆಯ ಅನಿವಾರ್ಯತೆ
ಸದ್ದುಗದ್ದಲವಿಲ್ಲದೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀಪಾದರ ಸಿದ್ಧಿಯನ್ನು ಪುಸ್ತಕ ರೂಪದಲ್ಲಿ ಓದುಗರ ಮುಂದಿಡುವ ಸೌಭಾಗ್ಯ ನಮ್ಮದಾಯಿತು. ದೊಡ್ಡ ಮಟ್ಟದಲ್ಲಿ ಈ ಪುಸ್ತಕ ಬಿಡುಗಡೆ ಮಾಡಬೇಕೆಂಬ ಮಹದಾಸೆ ಇತ್ತಾದರೂ, ಜಗತ್ತನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ಹತೋಟಿಗೆ ತರಲು ದೇಶ ಮಾಡುತ್ತಿರುವ ಪ್ರಯತ್ನಕ್ಕೆ ಕೈಜೋಡಿಸುವ ಉದ್ದೇಶದಿಂದ ಸರಳವಾಗಿ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. ಜಗತ್ತನ್ನೆ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್‌ನಿಂದ ಮುಕ್ತಿ ಸಿಗಲಿ ಎನ್ನುವ ಸಾಮೂಹಿಕ ಪ್ರಾರ್ಥನೆಯನ್ನು ಎಲ್ಲರೂ ಕೈಗೊಳ್ಳಬೇಕೆಂಬ ಆಶಯವನ್ನು ಸಂಧ್ಯಾ ಎಸ್‌. ಪೈ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next