Advertisement

Kerala ರಾಜ್ಯದ ಹೆಸರು ಬದಲಾಯಿಸಿ; ವಿಧಾನಸಭೆಯಲ್ಲಿ ಕೇಂದ್ರಕ್ಕೆ ಒತ್ತಾಯ

04:33 PM Aug 09, 2023 | Team Udayavani |

ತಿರುವನಂತಪುರಂ: ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಮತ್ತು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ರಾಜ್ಯವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಲು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿತು.

Advertisement

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರತಿಪಕ್ಷಗಳು ಇದಕ್ಕೆ ಯಾವುದೇ ತಿದ್ದುಪಡಿ ಅಥವಾ ಮಾರ್ಪಾಡುಗಳನ್ನು ಸೂಚಿಸದ ಕಾರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದರು.

ಮಲಯಾಳಂ ಭಾಷೆಯಲ್ಲಿ ರಾಜ್ಯದ ಹೆಸರು “ಕೇರಳಂ” ಎಂದು ಮುಖ್ಯಮಂತ್ರಿ ಹೇಳಿದರು. “1956ರ ನವೆಂಬರ್ 1 ರಂದು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಯಿತು. ಮಲಯಾಳಂ ಮಾತನಾಡುವ ಸಮುದಾಯಗಳಿಗೆ ಅಖಂಡ ಕೇರಳವನ್ನು ರಚಿಸುವ ಅಗತ್ಯವು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಬಲವಾಗಿ ಹೊರಹೊಮ್ಮುತ್ತಿದೆ. ಆದರೆ ನಮ್ಮ ರಾಜ್ಯದ ಹೆಸರನ್ನು ಸಂವಿಧಾನದ ಮೊದಲ ಶೆಡ್ಯೂಲ್ ನಲ್ಲೂ ಕೇರಳ ಎಂದು ಬರೆಯಲಾಗಿದೆ” ಎಂದರು.

ಸ್ಪೀಕರ್ ಎಎನ್ ಶಂಸೀರ್ ಅವರು ಶಾಸಕರು ಕೈ ಎತ್ತಿದ ಆಧಾರದ ಮೇಲೆ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next