Advertisement

ಟೋಲ್‌ ವಿರುದ್ಧ ಕಾರು ಸ್ಥಗಿತಗೊಳಿಸಿ ಪ್ರತಿರೋಧ

04:47 PM May 07, 2019 | sudhir |

ಕೋಟ: ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಕೋಟ ಜಿ.ಪಂ. ವ್ಯಾಪ್ತಿಯ ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯವರಿಗೆ ಏಕಾಏಕಿ ಟೋಲ್‌ ಸ್ವೀಕರಿಸುತ್ತಿರುವುದನ್ನು ಖಂಡಿಸಿ ಆ ಭಾಗದ ಸ್ಥಳೀಯರು ರವಿವಾರ ಟೋಲ್‌ಗೇಟ್‌ನಲ್ಲಿ ಕಾರು ಸ್ಥಗಿತಗೊಳಿಸಿ ಪ್ರತಿರೋಧ ವ್ಯಕ್ತಪಡಿಸಿದರು.

Advertisement

ಆರಂಭದಲ್ಲಿ ವಡ್ಡರ್ಸೆ ಕೊತ್ತಾಡಿಯ ಅಜಿತ್‌ ಶೆಟ್ಟಿ ಎನ್ನುವವರು ತಾವು ಸ್ಥಳೀಯರಾಗಿದ್ದು ಟೋಲ್‌ ನೀಡುವುದಿಲ್ಲ ಎಂದು ಕಾರನ್ನು ಗೇಟ್‌ನಲ್ಲಿ ಸ್ಥಗಿತಗೊಳಿಸಿದರು. ಆಗ ಆ ಗೇಟ್‌ ಬಂದ್‌ ಮಾಡಿ ಬೇರೆ ಗೇಟ್‌ನ ಮೂಲಕ ವಾಹನ ಬಿಡಲಾಯಿತು. ಅನಂತರ ಸ್ಥಳೀಯರಾದ ಸೋಮನಾಥ ಹೆಗ್ಡೆ, ರೆಹಮತ್‌ ಮಧುವನ ಮುಂತಾದವರು ತಮ್ಮ ಕಾರುಗಳನ್ನು ಇತರ ಎರಡು ಗೇಟ್‌ಗಳಲ್ಲಿ ಸ್ಥಗಿತಗೊಳಿಸಿ, ಟೋಲ್‌ ನಿರಾಕರಿಸಿದರು. ಆ ಸಂದರ್ಭ ಮೊದಲ ಸ್ಥಗಿತಗೊಂಡ ಗೇಟ್‌ನಲ್ಲಿ ಒಂದು ಗಂಟೆ ಕಾಲ ಹಾಗೂ ಇತರ ಗೇಟ್‌ನಲ್ಲಿ 20ನಿಮಿಷ ವಾಹನ ಸಂಚಾರ ಸ್ಥಗಿತಗೊಂಡಿತು.

ಅನಂತರ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್‌ ಶೆಟ್ಟಿ, ಕಾರ್ಯದರ್ಶಿ ವಿಟuಲ ಪೂಜಾರಿ, ಅಲ್ವಿನ್‌ ಅಂದ್ರಾಡೆ ಸ್ಥಳಕ್ಕಾಗಮಿಸಿ, ಈ ಹಿಂದೆ ಜನಪ್ರತಿನಿಧಿಗಳ ಸಮ್ಮುಖ ನಡೆದ ಒಪ್ಪಂದದಂತೆ ಬಾಕೂìರು ಹೊರತುಪಡಿಸಿ ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಟೋಲ್‌ ನಿರ್ವಾಹಕ ಕೇಶವ ಮೂರ್ತಿ ಜತೆ ಚರ್ಚೆ ನಡೆಸಿ ಸಹಮತ ವ್ಯಕ್ತವಾದ ಹಿನ್ನಲೆಯಲ್ಲಿ ಹೋರಾಟ ಕೈಬಿಟ್ಟು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next