Advertisement

ಮುಂಬಯಿ ಹೈಕೋರ್ಟ್‌ಗೆ ಹಾಜರಾದ ರೇಶ್ಮಾ;  ಹೆತ್ತವರ ಜತೆ ತೆರಳಲು ಅನುಮತಿ

10:49 AM Jan 23, 2018 | Team Udayavani |

ಮಂಗಳೂರು: ಅಪಹರಣ ಅರ್ಜಿ ಸಂಬಂಧಿಸಿ ಕಾನೂನು ವಿದ್ಯಾರ್ಥಿನಿ, ಕಾಸರಗೋಡಿನ ರೇಶ್ಮಾ ಸೋಮವಾರ ಮುಂಬಯಿ ಹೈಕೋರ್ಟ್‌ಗೆ ಹಾಜರಾದರು. ತನ್ನ  ಪತ್ನಿ  ರೇಶ್ಮಾಳನ್ನು  ಅಪಹರಿಸಲಾಗಿದೆ ಎಂದು ಮುಂಬಯಿ ಹೈಕೋರ್ಟಿನಲ್ಲಿ  ಮಹಮ್ಮದ್‌ ಇಕ್ಬಾಲ್‌ ಚೌಧುರಿ ದಾಖಲಿಸಿದ್ದ ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿ ಸಂಬಂಧ ಪಟ್ಟಂತೆ ರೇಶ್ಮಾ  ಸೋಮವಾರ  ಮುಂಬಯಿ ಹೈಕೋರ್ಟ್‌ಗೆ ಹಾಜ ರಾಗಿ, ತನ್ನನ್ನು ಯಾರೂ ಅಪಹರಿಸಿಲ್ಲ. ತಾನು ಸ್ವಇಚ್ಛೆಯಿಂದ ತನ್ನ ಊರಿಗೆ ತೆರಳಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು. ಅದನ್ನು ಪರಿಗಣಿಸಿ ಆಕೆಯ  ಊರಿಗೆ ಮರಳಲು ನ್ಯಾಯಾಲಯ ಅನುಮತಿ ನೀಡಿತು.

Advertisement

ರೇಶ್ಮಾ ಸೋಮವಾರ ನ್ಯಾಯ ವಾದಿಗಳ ಮೂಲಕ ಮಧ್ಯಾಹ್ನ 2.45ಕ್ಕೆ  ಹೈಕೋರ್ಟ್‌ಗೆ ಹಾಜರಾದರು. ಮಹಮ್ಮದ್‌ ಇಕ್ಬಾಲ್‌  ಕೂಡ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯವು  ರೇಶ್ಮಾ ಅವರ  ಹೇಳಿಕೆಯನ್ನು ದಾಖಲಿಸಿ ಸಹೋದರಿ  ಜತೆ  ಹುಟ್ಟೂರಿಗೆ ಹೋಗಲು ಅನು ಮತಿ ನೀಡಿತು.   ಮಹಮ್ಮದ್‌ ಇಕ್ಬಾಲ್‌  ರೇಶ್ಮಾ  ಹೆತ್ತವರ ವಿರುದ್ದ  ದಾಖಲಿಸಿದ್ದ  ಅರ್ಜಿಗೆ ಸಂಬಂಧಪಟ್ಟಂತೆ ತನಿಖೆಗೆ ತಡೆಯಾಜ್ಞೆ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next