Advertisement

ಚಂದಾ ಕೊಚ್ಚರ್‌ ವಜಾ ಕ್ರಮ ಸರಿ ಎಂದ ಆರ್.ಬಿ.ಐ.

09:39 AM Dec 19, 2019 | Hari Prasad |

ಮುಂಬಯಿ: ಐಸಿಐಸಿಐ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಸ್ಥಾನದಿಂದ ಚಂದಾ ಕೊಚ್ಚರ್‌ ಅವರನ್ನು ವಜಾ ಮಾಡಿದ್ದು ಸರಿಯಾದ ಕ್ರಮವೇ ಆಗಿದೆ ಎಂದು ಆರ್‌ಬಿಐ ವಾದಿಸಿದೆ. ವಜಾ ನಿರ್ಧಾರ ಪ್ರಶ್ನೆ ಮಾಡಿ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಆರ್‌ಬಿಐ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಅಂಶ ಉಲ್ಲೇಖಗೊಂಡಿದೆ.

Advertisement

ವಜಾ ಮಾಡುವ ಸಂದರ್ಭದಲ್ಲಿ ಬೋನಸ್‌, ವೇತನ, ಐಸಿಐಸಿಐ ಬ್ಯಾಂಕ್‌ನ ಷೇರುಗಳ ಮೊತ್ತವನ್ನೂ ತಡೆ ಹಿಡಿಯಲಾಗಿತ್ತು. ಕೊಚ್ಚರ್‌ ಪರ ವಕೀಲರು, ‘ಸ್ವಯಂ ಪ್ರೇರಿತರಾಗಿಯೇ ತಿಂಗಳ ಮೊದಲು ತಮ್ಮ ಕಕ್ಷಿದಾರರು ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಅನಂತರ ಆರ್‌ಬಿಐ ಮತ್ತು ಬ್ಯಾಂಕ್‌ನ ಆಡಳಿತ ಮಂಡಳಿ ವಜಾ ನಿರ್ಧಾರ ಕೈಗೊಂಡಿತ್ತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next