Advertisement

ಕೆಸರಿನಲ್ಲಿ  ಸಿಲುಕಿ ರಕ್ಷಣೆಗೊಳಗಾಗಿದ್ದ ಹೆಣ್ಣಾನೆ ಸಾವು;ಮರಿಯ ರೋದನ

09:40 AM Nov 29, 2018 | Team Udayavani |

ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಗ್ರಾಮದ ಸಮೀಪ ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಕಾಡಾನೆ ಗುರುವಾರ ಸಾವನ್ನಪ್ಪಿದೆ. ಪುಟ್ಟ ಮರಿಯ ರೋದನ ಮುಗಿಲು ಮುಟ್ಟಿದೆ.

Advertisement

ಅರಣ್ಯ ಇಲಾಖೆಯ ಸಿಬ್ಬಂದಿ ಸುಮಾರು 25 ವರ್ಷದ ಹೆಣ್ಣಾನೆಯನ್ನು ಹರಸಾಹಸ ಪಟ್ಟು ಕೆಸರಿನಿಂದ ಮಂಗಳವಾರ ರಕ್ಷಿಸಿದ್ದರು. ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯದಲ್ಲಿ ಹಿಟಾಚಿ ಯಂತ್ರಗಳನ್ನು ಬಳಸಿಕೊಳ್ಳಲಾಗಿತ್ತು. 

ದುಬಾರೆ ಅರಣ್ಯದಿಂದ 2 ಪಳಗಿದ ಆನೆ ಹಾಗೂ ಬಂಡಿಪುರದಿಂದ ವೈದ್ಯರನ್ನು ಕರೆಸಿಕೊಂಡಿದ್ದ ಅರಣ್ಯಾಧಿಕಾರಿಗಳು ಹಾಗೂ ವೈದ್ಯರ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಕೆಸರಲ್ಲಿ ಹೂತು ನರಳುತ್ತಿದ್ದ ಆನೆಯನ್ನು ಪಾರು ಮಾಡಿದ್ದರು. 

ತೀವ್ರ ನಿತ್ರಾಣವಾಗಿರುವ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಸಕಾನೆ ಶಿಬಿರಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೆ ಇದ್ದ ಕಾರಣ ಆನೆ ಸಾವನ್ನಪ್ಪಿದೆ. 6 ತಿಂಗಳ ಮರಿಯ ರೋದನ ಮುಗಿಲು ಮುಟ್ಟಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next