Advertisement

ಮಹಾಮೈತ್ರಿ ಕೂಟ ಸೇರುವ ನಿರ್ಧಾರಕ್ಕೆ ಕಾಲಾವಕಾಶ ಬೇಕು: ಪಟ್ನಾಯಕ್‌

01:46 PM Jan 08, 2019 | Team Udayavani |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗೆ ಮುನ್ನ  ವಿರೋಧ ಪಕ್ಷಗಳ ಮಹಾ ಮೈತ್ರಿ ಕೂಟ  (ಮಹಾ ಘಟಬಂಧನ)ವನ್ನು ಸೇರುವ ಬಗ್ಗೆ ನಿರ್ಧರಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ತನಗೆ ಬೇಕಿದೆ ಎಂದು ಬಿಜೆಡಿ ನಾಯಕ ಮತ್ತು ಒಡಿಶಾ ಮುಖ್ಯಮಂತ್ರಿ  ನವೀನ್‌ ಪಟ್ನಾಯಕ್‌ ಹೇಳಿದ್ದಾರೆ. 

Advertisement

ಮಹಾ ಘಟಬಂಧನದ ಬಗ್ಗೆ ಆಲೋಚಿಸಲು ನಾವು ಇನ್ನಷ್ಟು ಕಾಲವಕಾವ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಪಟ್ನಾಯಕ್‌ ಅವರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ಭತ್ತಕ್ಕೆ ಕನಿಷ್ಠ ಬೆಂಬಲ ದರ ಕ್ವಿಂಟಲ್‌ಗೆ ಈಗಿನ 1,750ರ ಬದಲು 2,930 ರೂ ನಿಗದಿಸಬೇಕು ಎಂದು ಆಗ್ರಹಿಸಿ ದಿಲ್ಲಿಯಲ್ಲಿ ಬಿಜೆಡಿ ಆಯೋಜಿಸಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಟ್ನಾಯಕ್‌ ದಿಲ್ಲಿ ಗೆ ಬಂದಿದ್ದರು.

ಪಟ್ನಾಯಕ್‌ ನೇತೃತ್ವದ 12 ಸದಸ್ಯರ ನಿಯೋಗವೊಂದು ಈ ಸಂಬಂಧ ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರನ್ನು ಭೇಟಿಯಾಗಲಿದೆ.  

Advertisement

Udayavani is now on Telegram. Click here to join our channel and stay updated with the latest news.

Next