Advertisement

ಗೋ ಕಳ್ಳಸಾಗಾಟ ತಡೆಯಲು ಆಗ್ರಹ, ಮನವಿ

09:13 PM Jun 25, 2019 | sudhir |

ಉಡುಪಿ: ಗೋವುಗಳ ಕಳ್ಳಸಾಗಾಟವನ್ನು ತಡೆಯುವಂತೆ ಆಗ್ರಹಿಸಿ
ಜಿಲ್ಲಾ ವಿಶ್ವ ಹಿಂದೂ ಪರಿಷದ್‌- ಬಜರಂಗದಳವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಅವರಿಗೆ ಮನವಿ ಸಲ್ಲಿಸಿತು.

Advertisement

ಇತ್ತೀಚೆಗೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಗೋ ಕಳ್ಳತನ ಪ್ರಕರಣ, ಹೆಬ್ರಿ, ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಹಲವು ಮಂದಿ ಭಾಗಿಯಾಗಿದ್ದು, ಆರೋಪಿಗಳ ನ್ನೆಲ್ಲ ಶೀಘ್ರದಲ್ಲೇ ಬಂಧಿಸಿ ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷದ್‌ ಜಿಲ್ಲಾ ಕಾರ್ಯದರ್ಶಿ ಪ್ರಮೋದ್‌ ಮಂದಾರ್ತಿ, ಬಜರಂಗದಳದ ಜಿಲ್ಲಾ ಸಂಚಾಲಕರಾದ ದಿನೇಶ್‌ ಮೆಂಡನ್‌, ಜಿಲ್ಲಾ ಗೋ ರಕ್ಷಾ ಪ್ರಮುಖ್‌ ದಿನೇಶ್‌ ಶೆಟ್ಟಿ ಹೆಬ್ರಿ, ಜಿಲ್ಲಾ ಸುರಕ್ಷಾ ಪ್ರಮುಖ್‌ ಮಹೇಶ್‌ ಶೆಣೈ ಬೈಲೂರು, ಉಡುಪಿ ನಗರ ವಿ.ಹಿಂ.ಪ. ಅಧ್ಯಕ್ಷ ಸಂತೋಷ್‌ ಸುವರ್ಣ, ಕುಂದಾಪುರ ವಿ.ಹಿಂ.ಪ. ಅಧ್ಯಕ್ಷ ವಿಜಯ್‌ ಶೆಟ್ಟಿ ಗೋಳಿಯಂಗಡಿ, ಉಡುಪಿ ನಗರ ಬಜರಂಗದಳ ಸಂಚಾಲಕ ಲೋಕೇಶ್‌ ಶೆಟ್ಟಿಗಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next