Advertisement

ರಮೇಶ ವರ್ಗಾವಣೆ ತಡೆಹಿಡಿಯಲು ಮನವಿ

01:59 PM Feb 11, 2020 | Team Udayavani |

ಹೊಸಪೇಟೆ: ಪೌರಾಯುಕ್ತ ರಮೇಶ್‌ ಹೊಸಪೇಟೆ ನಗರಸಭೆಗೆ ವರ್ಗಾವಣೆಯಾಗಿ ಬರುವುದನ್ನು ತಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು, ತಹಶೀಲ್ದಾರ್‌ ಎಚ್‌. ವಿಶ್ವನಾಥ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ಈ ಹಿಂದೆ ಹೊಸಪೇಟೆ ನಗರಸಭೆಯಲ್ಲಿ ಪೌರಾಯುಕ್ತರಾಗಿದ್ದ ರಮೇಶ ಅವರ ಅಧಿಕಾರ ಅವಧಿಯಲ್ಲಿ ಫಾರಂ-3 ಪಡೆಯಲು ಸಾರ್ವಜನಿಕರು, ತಿಂಗಳುಗಟ್ಟಲೆ ಅಲೆದಾಡುತ್ತಿದ್ದರು. ಮತ್ತೆ ರಮೇಶ ಅವರು ಹೊಸಪೇಟೆ ನಗರಸಭೆಗೆ ವರ್ಗವಣೆಯಾಗಿ ಬರುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಅವರು ಪುನಃ ಹೊಸಪೇಟೆ ನಗರಸಭೆಗೆ ವರ್ಗಾವಣೆಯಾಗಿ ಬರುವುದು ಬೇಡ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಗಳನ್ನು ಹೊಸಪೇಟೆ ನಗರಸಭೆಗೆ ಕರೆ ತರಬೇಕು ಎಂದು ಒತ್ತಾಯಿಸಿದರು. ಒಂದೊಮ್ಮೆ ನಿರ್ಲಕ್ಷ್ಯವಹಿಸಿದರೆ ಕರವೇ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ನಗರ ಘಟಕದ ಅಧ್ಯಕ್ಷ ಎಸ್‌.ಎಂ. ಜಾಫ‌ರ್‌, ಅಮೀರ್‌, ಬಸವರಾಜ, ಮಂಜುನಾಥ, ಗುಜ್ಜಲ ರಾಘವೇಂದ್ರ, ಭೀಮಣ್ಣ, ಬ್ಯಾಲಕುಂದಿ ರಮೇಶ, ಶಮಾ, ಸುಮಾ, ಚೆನ್ನಮ್ಮ, ಗಂಗಮ್ಮ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next