Advertisement

ಬೇಡಿಕೆ ಈಡೇರಿಕೆಗೆ ಆಗ್ರಹ

12:28 PM Dec 09, 2019 | Suhan S |

ಮಹಾಲಿಂಗಪುರ: ಕಚ್ಚಾನೂಲು, ಬಿಮ್‌, ಸಂಬಳ ಪಾವತಿ ಸೇರಿದಂತೆ ನೇಕಾರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಹಾಲಿಂಗಪುರ, ಚಿಮ್ಮಡ ಭಾಗದ ಕೈಮಗ್ಗ ನೇಕಾರರು ಹುಬ್ಬಳ್ಳಿಯಲ್ಲಿ ಕೆಎಚ್‌ಡಿಸಿ ನಿಗಮದ ಎಂ.ಡಿ.ರಾಮಚಂದ್ರಪ್ಪ  ಅವರಿಗೆ ಮನವಿ ಸಲ್ಲಿಸಿದರು.

Advertisement

ಬಳಿಕ ನೇಕಾರರು ಮಾತನಾಡಿ, ನಮಗೆ ವರ್ಷವಿಡಿ ಉದ್ಯೋಗ ನೀಡಬೇಕು, ಸಕಾಲಕ್ಕೆ ನೂಲು, ಬಿಮ್‌ ಪೂರೈಸಬೇಕು. ನೇಕಾರರ ಸಂಬಳ ಹೆಚ್ಚಿಸಬೇಕು. ಪ್ರೋತ್ಸಾಹ ಧನ ನೀಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಶಿಷ್ಯವೇತನ ವಿತರಿಸಬೇಕು. ಕೆಎಚ್‌ಡಿಸಿ ನೇಕಾರರಿಗೂ ಸಾಲಮನ್ನಾ ಸೌಲಭ್ಯ ಸಿಗುವಂತೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನೇಕಾರರಿಂದ ಮನವಿ ಸ್ವೀಕರಿಸಿದ ಕೆಎಚ್‌ಡಿಸಿ ನಿಗಮದ ಎಂ.ಡಿ ರಾಮಚಂದ್ರಪ್ಪ ಮಾತನಾಡಿ, ವಾರದಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ನಿರಂತರ ನೂಲು, ಬಿಮ ಪೂರೈಕೆ ಮತ್ತು ಸಕಾಲಕ್ಕೆ ಸಂಬಳ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೆಎಚ್‌ಡಿಸಿ ನಿಗಮದ ಉತ್ಪಾದನಾ ವಿಭಾಗದ ಪ್ರಭಾರಿ ವ್ಯವಸ್ಥಾಪಕ ಸಿ.ಪಿ.ಕೊಡತೆ ಇದ್ದರು. ಕೈಮಗ್ಗ ನೇಕಾರ ನಿಯೋಗದಲ್ಲಿ ಜಿ.ಎಸ್‌.ಗೊಂಬಿ, ಗುರುಪಾದ ಅಂಬಿ, ಸದಾಶಿವ ಜಿಡ್ಡಿಮನಿ, ಫಿರಸಾಬ ನದಾಫ್‌, ರಾಚು ದಢೂತಿ, ಮಹಾಲಿಂಗಪ್ಪ ಬುದ್ನಿ, ಗಂಗಪ್ಪ ಅಂಬಿ, ಶಂಕರ ಮುಂಡಗನೂರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next