Advertisement

ಪಿಂಚಣಿ ಬಿಡುಗಡೆಗೆ ಆಗ್ರಹ

04:15 PM Sep 24, 2019 | Suhan S |

ರಾಯಚೂರು: ಕಳೆದ ಎರಡು ವರ್ಷದಿಂದಲೂ ಎಸ್‌ಎಸ್‌ವೈ, ಒಎಪಿ ಹಾಗೂ ಡಿಡಬ್ಲೂಪಿ, ಪಿಎಚ್‌ಸಿ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಬಿಡುಗಡೆಯಾಗದೆ ಸಾಕಷ್ಟು ಸಮಸ್ಯೆಯಾಗಿದ್ದು, ಕೂಡಲೇ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಬಣ) ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿದ ಕಾರ್ಯಕರ್ತರು, ಬಳಿಕ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವದ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಒಎಪಿ ಅಂಗವಿಕಲರ ಪಿಂಚಣಿ ಯೋಜನೆಗಳಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಎರಡು ವರ್ಷದಿಂದ ಫಲಾನುಭವಿಗಳ ಖಾತೆಗೆ ಪಿಂಚಣಿ ಹಣವೇ ಜಮಾ ಮಾಡಿಲ್ಲ. ಆದರೆ, ಇದನ್ನೇ ನಂಬಿ ಜೀವನ ದೂಡುತ್ತಿರುವವರಿಗೆ ಇದರಿಂದ ಸಾಕಷ್ಟು ಸಮಸ್ಯೆಯಗುತ್ತಿದೆ ಎಂದು ದೂರಿದರು. ಮೊದಲಾದರೆ 2-3 ತಿಂಗಳಿಗೆ ಒಮ್ಮೆಯಾದರೂ ಪಿಂಚಣಿ ಬರುತ್ತಿತ್ತು. ಆದರೆ, ಈಗ ವರ್ಷಾನುಗಟ್ಟಲೇ ಹಣ ಬಾರದಿದ್ದರೆ ಫಲಾನುಭವಿಗಳಿಗೆ ಸಾಕಷ್ಟು ಕಷ್ಟವಾಗಲಿದೆ. ಇಲ್ಲವಾದರೆ ಅವರೆಲ್ಲ ಪರಾವಲಂಬಿಗಳಾಗಬೇಕಾಗುತ್ತದೆ. ಈ ಕುರಿತು ಖಜಾನೆ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ಕಚೇರಿ ಅ ಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸರ್ಕಾರ ಕೂಡಲೇ ಈ ಎಲ್ಲ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ನೀಡಲು ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಖಲೀಲ್‌ ಪಾಷಾ, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶ ಮಂಗಾನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಚಯ್ಯಸ್ವಾಮಿ, ಸದಸ್ಯರಾದ ಆನಂದ, ಹಾಜಿ, ಅಂಜಿ, ಖಾಜಾ, ಮನ್ನಾನ್‌, ಶಾಕೀರ, ಫಯಾಜ್‌, ಶಾಲಂ, ಅಸ್ಲಾಂ, ಪಾಡುರಂಗ, ಮಹೆಬೂಬ್‌, ಬಡೇಸಾಬ್‌, ಮಕೂºಲ್‌ ಸೇರಿ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next