Advertisement

ನಿರಂತರ ವಿದ್ಯುತ್‌ ನೀಡಲು ಮನವಿ

11:05 AM Oct 25, 2021 | Team Udayavani |

ಯಡ್ರಾಮಿ: ತಾಲೂಕಿನ ಗ್ರಾಮಗಳಿಗೆ ನಿರಂತರ ವಿದ್ಯುತ್‌ ಸರಬರಾಜು ಮಾಡುವಂತೆ ಬಿಸಿಲ ನಾಡಿನ ಹಸಿರು ಸೇನೆ ಹಾಗೂ ತಾಲೂಕು ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲೂಕು ಜೆಸ್ಕಾಂ ಉಪ ವಿಭಾಗದ ಎಇಇಗೆ ಮನವಿ ಸಲ್ಲಿಸಲಾಯಿತು.

Advertisement

ತಾಲೂಕು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಮರನಾಥ ಸಾಹು ಕುಳಗೇರಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್‌ ಸರಬರಾಜಿನ ಕೊರತೆ ಉಂಟಾಗಿದೆ. ಕ್ರಮಬದ್ಧವಾಗಿ ವಿದ್ಯುತ್‌ ನೀಡಬೇಕು, ವಿದ್ಯುತ್‌ ನೀಡುವ ಸಮಯದ ಬಗ್ಗೆ ಆ ಭಾಗದ ರೈತರ ಗಮನಕ್ಕೆ ತರಬೇಕು. ಪಂಪಸೆಟ್‌ಗಳು ನಿರಂತರವಾಗಿ ನಡೆಯುವಂತಾಗಲು ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್‌ ಹರಿಸುವಂತೆ ತಾಲೂಕಿನ ರೈತರ ಪರವಾಗಿ ವಿನಂತಿಸುತ್ತೇನೆ ಎಂದರು.

ಮನವಿ ಸ್ವೀಕರಿಸಿದ ಜೆಸ್ಕಾಂ ಎಇಇ ಮಾತನಾಡಿ, ರೈತರ ಸಮಸ್ಯೆ ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಮರನಾಥ ಸಾಹು ಕುಳಗೇರಿ, ಶಫಿವುಲ್ಲಾ ದಖನಿ, ಉಸ್ಮಾನ್‌ ಬಾಗವಾನ, ಖಾಜಾಪಾಷಾ, ಬಾಬು ಚೌಸಮಗಿ, ಉಸೇನಭಾಷಾ ಚಿಂಚೋಳಿ, ರಾಜಕುಮಾರ, ಅಬ್ದುಲ್‌ ಚೌದ್ರಿ, ಅವಿನಾಶ, ಸಾಹೇಬಖಾನ್‌ ಚೌದ್ರಿ, ಶಿವರಾಜ ಚೀಲಾ, ಶಿವರಾಜ ಹೂಗಾರ, ಲಾಳೇಸಾಬ ಕಕ್ಕಳಮೇಲಿ, ಮುತ್ತು ಮುಳ್ಳೊಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next