Advertisement

ಕಲ್ಲಿದ್ದಲು ನೀಡುವಂತೆ ಕೇಂದ್ರಕ್ಕೆ  ಮನವಿ

06:50 AM Oct 14, 2017 | Team Udayavani |

ಬೆಂಗಳೂರು: ರಾಜ್ಯದ ರಾಯಚೂರು ಮತ್ತು ಬಳ್ಳಾರಿ ಥರ್ಮಲ್‌ ಪವರ್‌ ಘಟಕಗಳಿಗೆ ವಿದ್ಯುತ್‌ ಉತ್ಪಾದನೆಗೆ ಅಗತ್ಯ ಕಲ್ಲಿದ್ದಲು ಪೂರೈಕೆ ಮಾಡುವಂತೆ ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Advertisement

ದಿಲ್ಲಿಯಲ್ಲಿ ಮನವಿ ಸಲ್ಲಿಸಿರುವ ಅವರು, ರಾಜ್ಯದ ಬಿಪಿಟಿಎಸ್‌, ಆರ್‌ಟಿಪಿಎಸ್‌ ಘಕಟಗಳು ಪ್ರತಿದಿನ 70 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿವೆ. ಎಸ್ಸಿಸಿಎಲ್‌ ಮತ್ತು ಎಂಸಿಎಲ್‌ನಿಂದ ಶೇ. 100ರಷ್ಟು ಕಲ್ಲಿದ್ದಲು ಸರಬರಾಜಾಗಿದ್ದು, ಡಬ್ಲ್ಯುಸಿಎಲ್‌ನಿಂದ ಕೇವಲ ಶೇ. 49ರಷ್ಟು ಮಾತ್ರ ಕಲ್ಲಿದ್ದಲು ಸರಬರಾಜಾಗಿದ್ದು, ರಾಜ್ಯ ಸಾಕಷ್ಟು ಕಲ್ಲಿದ್ದಲು ಕೊರತೆ ಎದುರಿಸುತ್ತಿದೆ.

ಅಕ್ಟೋಬರ್‌ 2017ರಿಂದ ಮಾರ್ಚ್‌ 2018ರ ವರೆಗೆ 80.79 ಮೆಟ್ರಿಕ್‌ ಟನ್‌ ಕಲ್ಲಿದ್ದಲು ಅಗತ್ಯವಿದ್ದು, ಕೆಪಿಸಿಎಲ್‌ನಿಂದ ಒಡಿಸ್ಸಾದಲ್ಲಿರುವ ಘೋಗರ್‌ಪಲ್ಲಿ ಕಲ್ಲಿದ್ದಲು ಗಣಿಯನ್ನು ಬ್ಲಾಕ್‌ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಕಲ್ಲಿದ್ದಲು ಗಣಿಯನ್ನು ನಿಗದಿಪಡಿಸಿ, ಡಬ್ಲ್ಯುಸಿಎಲ್‌, ಎಸ್ಸಿಸಿಎಲ್‌ ಹಾಗೂ ಎಂಸಿಎಲ್‌ನಿಂದ ಶೇ. 100ರಷ್ಟು ಕಲ್ಲಿದ್ದಲು ಸರಬರಾಜು ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next