Advertisement

ರಾಮನವಮಿ ಗಲಭೆಯ ಬಗ್ಗೆ ವರದಿ ನೀಡಿ: ಕಲ್ಕತ್ತಾ ಹೈಕೋರ್ಟ್‌

12:24 AM Apr 04, 2023 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದ ಹೂಗ್ಲಿಯಲ್ಲಿ ರಾಮನವಮಿ ಆಚರಣೆ ವೇಳೆ ಉಂಟಾಗಿದ್ದ ಗಲಭೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಳದ ಘಟನೆಗಳ ಬಗ್ಗೆ ಸಮಗ್ರ ವರದಿ ನೀಡು ವಂತೆ ಕಲ್ಕತ್ತಾ ಹೈಕೋರ್ಟ್‌ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನಿರ್ದೇಶಿಸಿದೆ.

Advertisement

ಹೂಗ್ಲಿಯಲ್ಲಿ ಮಾತ್ರವಲ್ಲದೆ, ಶಿವಪುರ, ದಾಲ್ಕೋಲ ದಲ್ಲಿಯೂ ಗಲಭೆಗಳು ನಡೆದಿದ್ದವು. ವಿಪಕ್ಷ ನಾಯಕ ಸುವೇಂದು ಅಧಿಕಾರಿ ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿ ದ್ದರು. ನ್ಯಾ| ಎಸ್‌. ಶಿವಜ್ಞಾನಂ ಹಾಗೂ ನ್ಯಾ| ಹಿರಣ್ಮಯ್‌ ಭಟ್ಟಾಚಾರ್ಯ ಅವರ ವಿಭಾಗೀಯ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಸಮಗ್ರ ವರದಿಯ ಜತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಲ್ಲಿಸುವಂತೆ ಆದೇಶಿಸಿದೆ.

ಮುಖಂಡರಿಗೆ ತಡೆ: ಗಾಯಾಳು ಕಾರ್ಯಕರ್ತರನ್ನು ಭೇಟಿಯಾಗದಂತೆ ಬಿಜೆಪಿ ಮುಖಂಡ ಸುಕಾಂತ ಮಜೂಂದಾರ್‌ರನ್ನು ಪೊಲೀಸರು ತಡೆದಿದ್ದಾರೆ.

ಶಾ ಪ್ರಚಾರ ಆರೋಪ: ಬಿಹಾರ ಹಿಂಸಾಚಾರ ಕುರಿತು ಶಾಂತಿಗೆ ಮನವಿ ಮಾಡದೆ, ಪ್ರಚಾರ ಪಡೆ ದಿದ್ದಾರೆ ಎಂದು ಬಿಹಾರ ಸರಕಾರ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next