Advertisement

ಕಾಲಮಿತಿಯೊಳಗೆ ಸಾಲ ಮರುಪಾವತಿಸಿ: ಚಪ್ಪರದಳ್ಳಿ

12:54 PM Oct 18, 2019 | Suhan S |

ಹಿರೇಕೆರೂರ: ಬ್ಯಾಂಕ್‌ಗಳು ನೀಡುವ ಸಾಲ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವ ಜತಗೆ ಪಡೆದ ಸಾಲವನ್ನು ಕಾಲಮಿತಿಯಲ್ಲಿ ಮರುಪಾವತಿ ಮಾಡಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್‌ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಹೇಳಿದರು.

Advertisement

ರಟ್ಟಿಹಳ್ಳಿಯ ಕೆಸಿಸಿ ಬ್ಯಾಂಕ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಮಾರುತಿ ಮಹಿಳಾ ಸ್ವಸಹಾಯ ಸಂಘ ಮತ್ತು ಬಸವೇಶ್ವರ ಮಹಿಳಾ ಸ್ವಸಹಾಯ ಸಂಘಕ್ಕೆ ಮಂಜೂರಾದ ತಲಾ 5 ಲಕ್ಷ ರೂ. ಮೊತ್ತದ ಸಾಲದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಮಹಿಳೆಯರು ಆರ್ಥಿಕ ಪ್ರಗತಿಗೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುತ್ತಿದ್ದು, ಪಡೆದ ಸಾಲವನ್ನು ವ್ಯರ್ಥ ಖರ್ಚು ಮಾಡದೆ, ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಪಡೆದ ಸಾಲ ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಿಕೊಡಲಾಗುತ್ತದೆ ಎಂದು ಹೇಳಿದರು.

ಶಾಖಾ ವ್ಯವಸ್ಥಾಪಕ ಎ.ಸಿ.ಪಾಟೀಲ, ಕೆಸಿಸಿ ಬ್ಯಾಂಕ್‌ ನಿರೀಕ್ಷಕ ಕೆ.ಆರ್‌.ಹುಲ್ಲತ್ತಿ, ಎಸ್‌.ಬಿ.ಪಾಟೀಲ, ಎಸ್‌.ಎನ್‌.ನಾಡರ, ಎಸ್‌.ಎಂ.ರೋತಿ, ಸಿ.ಎಸ್‌.ಗುರಪ್ಪನವರ, ಶ್ವೇತಾ ಮರ್ಕಳ್ಳಿ, ಸಂಘದ ಪ್ರತಿನಿಧಿ ಬಸಮ್ಮ ಗೌಡರ, ಗಿರಿಜಕ್ಕ ಬಣಕಾರ, ಗೀತಾ ಬಣಕಾರ, ಮಲ್ಲಮ್ಮ ಬಣಕಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next