Advertisement

Renukaswamy Case: ಏನೋ ಮಾಡಲು ಹೋಗಿ ಇನ್ನೇನೋ ಆಗಿ ಹೋಯ್ತು: ದರ್ಶನ್‌ ಪಶ್ಚಾತ್ತಾಪ

03:28 AM Sep 07, 2024 | Team Udayavani |

ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹ ದಲ್ಲಿರುವ ದರ್ಶನ್‌ ತನ್ನನ್ನು ಭೇಟಿಯಾದ ಸಹೋದರ ದಿನಕರ್‌ ತೂಗುದೀಪ್‌ ಬಳಿ ಏನೋ ಮಾಡಲು ಹೋಗಿ ಇನ್ನೇನೋ ಆಗಿ ಹೋಯಿತು. ಈ ವಿಷಯ ಇಷ್ಟರ ಮಟ್ಟಿಗೆ ಆಗುತ್ತದೆ ಎಂದು ಅರ್ಥವಾಗಲೇ ಇಲ್ಲ. ಏನ್‌ ಸ್ಟಾರ್‌ಗಿರಿ ಇದ್ದರೇನು ಬಂತು ಎಂದು ಬೇಸರ, ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.

Advertisement

ದರ್ಶನ್‌ನನ್ನು ಗುರುವಾರ ಪತ್ನಿ ವಿಜಯಲಕ್ಷ್ಮೀ , ಸಹೋದರ ದಿನಕರ್‌ ತೂಗುದೀಪ್‌, ಸಂಬಂಧಿ ಸುಶಾಂತ್‌ ನಾಯ್ಡು ಭೇಟಿಯಾಗಿದ್ದರು. ಚಾರ್ಜ್‌ಶೀಟ್‌, ಬೇಲ್‌ ಅರ್ಜಿ ಕುರಿತು ಸಹೋದರನ ಜತೆ ದರ್ಶನ್‌ ಚರ್ಚಿಸಿ ಮಾಹಿತಿ ಪಡೆದಿದ್ದಾನೆ. ಪತಿಯ ಪಶ್ಚಾತ್ತಾಪದ ಮಾತುಗಳನ್ನು ಕೇಳಿದ ಪತ್ನಿ ವಿಜಯಲಕ್ಷ್ಮೀ, ಪ್ರಕರಣದಲ್ಲಿ ಜಾಮೀನು ಸಿಗಲಿದೆ ಎಂದು ಧೈರ್ಯ ತುಂಬಿದ್ದಾರೆನ್ನಲಾಗಿದೆ.

ಇನ್ನೂ ಸಿಗದ ಟಿವಿ
ಜೈಲಿನಲ್ಲಿ ಒಂಟಿತನದಿಂದ ಬಳಲುತ್ತಿರುವ ದರ್ಶನ್‌ ಟಿವಿ ನೀಡುವಂತೆ ಬೇಡಿಕೆ ಇಟ್ಟಿದ್ದರೂ ಇನ್ನೂ ಒದಗಿಸಿಲ್ಲ. ಈ ಹಿಂದೆ ಇದ್ದ ಟಿವಿ ಕೆಟ್ಟು ಹೋಗಿದ್ದರಿಂದ ಅದನ್ನು ದುರಸ್ತಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next