Advertisement

Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?

09:04 AM Oct 12, 2024 | Team Udayavani |

ಬಳ್ಳಾರಿ: ಜೈಲಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ದರ್ಶನ್ ಗೆ ಆರ್ಥೋಪೆಡಿಕ್ ತಜ್ಞವೈದ್ಯರಿಂದ ತಪಾಸಣೆ ನಡೆಸಲಾಗಿದ್ದು ಇದೀಗ ನ್ಯೂರೋ ಸರ್ಜನ್ ರಿಂದ ದರ್ಶನ್ ತಪಾಸಣೆ ನಡೆಯುತ್ತಿದೆ.

Advertisement

ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನಲೆ ದರ್ಶನ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆತರಲಾಗಿದ್ದು ವೈದ್ಯರಿಂದ ತಪಾಸಣೆ ನಡೆಸಲಾಗುತ್ತಿದೆ.

ಕಳೆದ ವಾರ ಅರ್ಥೋಪೆಡಿಕ್ ವೈದ್ಯರು ತಪಾಸಣೆ ಮಾಡಿದ್ದರು ಇದೀಗ ನ್ಯೂರೋ ಸರ್ಜನ್ ಡಾ.ವಿಶ್ವನಾಥ ಅವರಿಂದ ದರ್ಶನ್ ತಪಾಸಣೆ ನಡೆಸಲಾಗುತ್ತಿದೆ.

ಜೈಲಿನ ಅಧಿಕಾರಿಗಳಿಗೆ ವೈದ್ಯಕೀಯ ರಿಪೋರ್ಟ್ ಕೊಡೋ ಮುನ್ನ ನ್ಯೂರೋ ಸರ್ಜನ್ ಪರಿಶೀಲಿಸಬೇಕಿತ್ತು. ನ್ಯೂರೋ ಸರ್ಜನ್ ವರದಿ ಬಳಿಕ ಅರ್ಥೋಪೆಡಿಕ್ ವೈದ್ಯರು ದರ್ಶನ್ ಬೆನ್ನು ನೋವಿನ ಪೂರ್ಣ ವರದಿ ನೀಡಲಿದ್ದಾರೆ. ವೈದ್ಯರು ನೀಡಿದ ವರದಿ ಆಧಾರದ ಮೇಲೆ ದರ್ಶನ್ ಬೆಂಗಳೂರು ಶಿಫ್ಟ್ ಆಗೋ ಬಗ್ಗೆ ನಿರ್ಧಾರವಾಗಲಿದೆ. ವೈದ್ಯರು ನೀಡಿದ ವರದಿ ಕೋರ್ಟ್ ಗೆ ನೀಡಿ ಅಲ್ಲಿಂದ ಅನುಮತಿ ಬಂದ ಬಳಿಕ. ಬೆಂಗಳೂರು ಶಿಫ್ಟ್ ಸಾಧ್ಯತೆ ಹೆಚ್ಚುವರಿ ಸ್ಕ್ಯಾನಿಂಗ್, ಚಿಕಿತ್ಸೆ ಅಥವಾ ಸರ್ಜರಿ ಮಾಡಬೇಕಾದರೆ ಬೆಂಗಳೂರಿಗೆ ಹೋಗೋ ಅನಿವಾರ್ಯ ಇದ್ದರೆ ಮಾತ್ರ ಕೋರ್ಟ್ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next