Advertisement

Renukaswamy Case: ದರ್ಶನ್ ಸಹಚರನನ್ನು ವಿಜಯಪುರ ಜೈಲಿಗೆ ಸ್ಥಳಾಂತರಿಸುವ ಮಾಹಿತಿ ಇಲ್ಲ

01:54 PM Aug 28, 2024 | sudhir |

ವಿಜಯಪುರ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಆರೋಪಿ ಚಿತ್ರನಟ ದರ್ಶನ ಸಹಚರನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವ ಯಾವುದೇ ಮಾಹಿತಿ ಈ ವರೆಗೆ ವಿಜಯಪುರ ಅಧಿಕಾರಿಗಳಿಗೆ ಬಂದಿಲ್ಲ.

Advertisement

ರೇಣುಕಾಸ್ವಾಮಿ ಹತ್ಯೆ ಪ್ರಕರಣದ 10ನೇ ಆರೋಪಿ ವಿನಯನನ್ನು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ವಿಜಯಪುರ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ‌.ಐ ಜಿ‌.ಮ್ಯಾಗೇರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ಯಾವುದೇ ಬಂಧಿಯನ್ನು ವಿಜಯಪುರ ಜೈಲಿಗೆ ಸ್ಥಳಾಂತರಿಸುವ ಕುರಿತು ಈ ವರೆಗೂ ಅಧಿಕೃತವಾಗಿ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದಿದ್ದಾರೆ.

ಒಂದೊಮ್ಮೆ ಆರೋಪಿ ವಿನಯನನ್ನು ನಮ್ಮ ಜೈಲಿಗೆ ಹತ್ತಾಂತರದ ಕುರಿತು ಮಾಹಿತಿ ಬಂದರೆ ಪರಿಶೀಲಿಸುತ್ತೇವೆ. ಅಲ್ಲದೇ ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ ಆರೋಪಿ ವಿನಯಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಇಲ್ಲಿರುವ ಹಾಲಿ ಇತರೆ ಕೈದಿಗಳಂತೆ ಆತನ ಮೇಲು ನಿಗಾ ವಹಿಸಲಾಗುತ್ತದೆ.

ಕಾರಾಗೃಹದಲ್ಲಿರುವ ಇತರೆ ಕೈದಿಗಳಂತೆ ಆತನನ್ನೂ ನೋಡಿಕೊಳ್ಳಲಾಗುತ್ತದೆ ಎಂದು ವಿಜಯಪುರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ: #MeToo; ಹೇಮಾ ಕಮಿಟಿ ವರದಿ:ತಂದೆಯಿಂದಾದ ದೌರ್ಜನ್ಯ ನೆನಪಿಸಿಕೊಂಡ ಖುಷ್ಬು

Advertisement

Udayavani is now on Telegram. Click here to join our channel and stay updated with the latest news.

Next