Advertisement

ಅಧಿಕಾರ ಕಳೆದುಕೊಂಡ ಮೇಲೆ ಎಚ್‌ಡಿಕೆಗೆ ಬುದ್ಧಿ ಭ್ರಮಣೆಯಾಗಿದೆ: ರೇಣುಕಾಚಾರ್ಯ

10:15 AM Feb 10, 2020 | sudhir |

ಶಿಕಾರಿಪುರ: ಅಧಿಕಾರ ಕಳೆದುಕೊಂಡ ಮೇಲೆ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಹೀಗಾಗಿ ಅವರು ಬಿಜೆಪಿ ಸರಕಾರ ಉಳಿಯುವುದಿಲ್ಲ ಎನ್ನುತ್ತಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಧಿ ಕಾರ ಕಳೆದುಕೊಂಡ ಮೇಲೆ ಅವರ ಮನಃಸ್ಥಿತಿಯೇ ಸರಿಯಿಲ್ಲ. ಹುಚ್ಚುಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ, ಬಿಜೆಪಿಗೆ ಬೈಯ್ಯುವುದೇ ಅವರ ಕಾಯಕವಾಗಿದೆ ಎಂದರು.

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇನ್ನಾದರೂ ಹಗಲುಗನಸು ಕಾಣೋದನ್ನು ಬಿಡಲಿ. ಸರಕಾರ ಪತನ ಆಗಲ್ಲ. ಯಡಿಯೂರಪ್ಪ ಕಲ್ಲು ಬಂಡೆ ಇದ್ದಂತೆ. ಮುಂದಿನ ಮೂರೂವರೆ ವರ್ಷ ಇವರೇ ಸಿಎಂ ಆಗಿರಲಿದ್ದು ಇದೇ ಸರಕಾರವಿರಲಿದೆ. ಅಲ್ಲದೆ 2023ಕ್ಕೆ ಮತ್ತೆ ಬಿಜೆಪಿ ಅ ಧಿಕಾರಕ್ಕೆ ಬರಲಿದೆ ಎಂದರು.

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಬೇಕು ಎಂಬುದು ಜಿಲ್ಲೆಯ ಜನರ ಆಕಾಂಕ್ಷೆ. ಇದಕ್ಕೆ ನಾನು ಯಾವುದೇ ಒತ್ತಡ ಹೇರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next