Advertisement

ಪಕ್ಷಕ್ಕೆ ಹಮಾಲಿ ಮಾಡಿದ್ದು ನಾವು, ಬೇರೆಯವರು ಅಧಿಕಾರ ಅನುಭವಿಸುತ್ತಿದ್ದಾರೆ: ರೇಣುಕಾಚಾರ್ಯ

01:10 AM Jan 30, 2021 | Team Udayavani |

ಬೆಂಗಳೂರು: ಕೆಲವು ಸಚಿವರು 2-3 ಖಾತೆಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಪಕ್ಷಕ್ಕೆ ಹಮಾಲಿ ಮಾಡಿದ್ದು ನಾವು, ಬೇರೆಯವರು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

Advertisement

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿವ ಸ್ಥಾನ ಕೊಡುವುದು ಗೌರವಕ್ಕಾಗಿ, ದೊಡ್ಡ ಖಾತೆ ಯಾಕೆ ಬೇಕು? ನಮ್ಮ ಪೂರ್ವಜರು ತೆಂಗಿನಮರ ನೆಟ್ಟಿದ್ದರು. ಈಗ ಬೇರೆಯವರು ಎಳನೀರು ಕುಡಿಯುತ್ತಿ¨ªಾರೆ ಎಂದು ಪರೋಕ್ಷವಾಗಿ ಸುಧಾಕರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಶಾಸಕರು ಸಭೆ ಸೇರಿದ್ದ ಪ್ರಶ್ನೆಗೆ ಉತ್ತರಿಸಿ, ನಾವೆಲ್ಲ ಸಮಾನ ಮನಸ್ಕರು. ಬಹಳ ಜನ ಬಿಜೆಪಿ ಶಾಸಕರಿದ್ದೇವೆ. ಪಕ್ಷ ಹಾಗೂ ಸಿಎಂಗೆ ಮುಜುಗರ ಆಗಬಾರದು ಎಂದು ಸುಮ್ಮನಿದ್ದೇವೆ. ಇನ್ನೂ ಎರಡು ವರ್ಷ ಸ್ಥಿರ ಸರಕಾರ ನೀಡಬೇಕು. ಆದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು, ಬಂದರೆ ಅದರ ವಿರುದ್ಧ ನಿಲ್ಲುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next