Advertisement

ನವೀಕೃತ ಸೇತುವೆ-ಬಾಂದಾರ ಪರಿಶೀಲನೆ

01:31 PM Oct 29, 2019 | Team Udayavani |

ಭಾಲ್ಕಿ: ತಾಲೂಕಿನ ಮಾಣಿಕೇಶ್ವರ ಮತ್ತು ಜೀಗ್ಯಾಳ ಗ್ರಾಮ ಹತ್ತಿರದ ಸೇತುವೆ-ಬಾಂದಾರ ಅನ್ನು ಶಾಸಕ ಈಶ್ವರ ಖಂಡ್ರೆ ಸೋಮವಾರ ಪರಿಶೀಲಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, 2006ರಲ್ಲಿ ನಮ್ಮ ತಂದೆ ಭೀಮಣ್ಣಾ ಖಂಡ್ರೆ ಅವರ ಅವಧಿಯಲ್ಲಿ ಚಾಲನೆ ನೀಡಿದ ಮಾಂಜರಾ ನದಿಗೆ ಕಟ್ಟಲಾದ ಮಾಣಿಕೇಶ್ವರ ಮತ್ತು ಜೀಗ್ಯಾಳ ಸೇತುವೆ-ಬಾಂದಾರಗಳ ಗೇಟ್‌ ಗಳಲ್ಲಿ ದೋಷದಿಂದ ನೀರು ನಿಲ್ಲುತ್ತಿದ್ದಿಲ್ಲ. ಕೆಲವು ದಿನಗಳ ಹಿಂದೆ ಈ ಕುರಿತು ಪರಿಶೀಲನೆ ನಡೆಸಿ, ಈ ಬ್ಯಾರೇಜುಗಳ ಗೇಟ್‌ ಕಾಮಗಾರಿ ನವೀಕರಣ ಮಾಡಲಾಗಿದೆ. ಹೀಗಾಗಿ ಈ ಭಾಗದ ರೈತರಿಗೆ ಈ ಬ್ಯಾರೇಜುಗಳು ಸಂಜೀವಿನಿಯಾಗಿ ಪರಿಣಮಿಸಿವೆ ಎಂದರು.

ಸದ್ಯದಲ್ಲಿ ಬಿದ್ದ ಕಡಿಮೆ ಮಳೆಯಿಂದಲೇ ಇಲ್ಲಿ ಸುಮಾರು 2.5 ನಿಂದ 3 ಮೀಟರ್‌ ವರೆಗೆ ನೀರು ನಿಂತಿದೆ. ಇದರಿಂದ ಇಲ್ಲಿಯ ರೈತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು. ಸಣ್ಣ ನೀರಾವರಿ ಇಲಾಖೆಯ ಎಇಇ ವಿಲಾಸ ಮಾಶೆಟ್ಟೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಾಬುರಾವ್‌ ಪೊಲೀಸ್‌ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next