Advertisement

“ದೇಗುಲಗಳ ಅಭಿವೃದ್ಧಿಯಿಂದ ಮನಕ್ಕೆ ನೆಮ್ಮದಿ’

03:45 AM Jul 06, 2017 | Team Udayavani |

ಬದಿಯಡ್ಕ: ಊರಿನ ಜನರ ಮನೆ ಮನಕ್ಕೆ ನೆಮ್ಮದಿ ಲಭಿಸಲು ಆಸುಪಾಸಿನ ದೇವಾಲಯಗಳು ಅಭಿವೃದ್ಧಿಯನ್ನು ಕಾಣಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೇತನಾ ಹೇಳಿದರು.

Advertisement

ಅವರು ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ನಡೆದ ಬದಿಯಡ್ಕ ಸಮೀಪದ ಚೇಕೂìಡ್ಲು ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ಕೊಡಮಾಡಿದ ಅನುದಾನ ರೂಪಾಯಿ ಮೂರು ಲಕ್ಷದ ಡಿ.ಡಿ.ಯನ್ನು ಶ್ರೀ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಹಸ್ತಾಂತರಿಸಿ ಮಾತನಾಡಿದರು. ಕಾಲ ಕಾಲಕ್ಕೆ ಕ್ಷೇತ್ರದ ಕೆಲಸ ಕಾರ್ಯಗಳು ನಡೆಯಬೇಕು. ಕ್ಷೇತ್ರಗಳ ಜೀರ್ಣೋದ್ಧಾರದಿಂದ ಹಿಂದೂ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಉಂಟಾಗುತ್ತದೆ. ಸಂಘಟನೆಯು ಬಲಗೊಳ್ಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next